
ಉಡುಪಿ(ಸೆ.18): ರಾಸಲೀಲೆ ಪ್ರಕರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡ ಶಾಸಕ ಎಚ್.ವೈ ಮೇಟಿ ಕರಾವಳಿ ದೈವಗಳ ಮೊರೆ ಹೋಗಿದ್ದಾರೆ. ರಾಸಲೀಲೆ ಪ್ರಕರಣದಲ್ಲಿ ನನಗೆ ಅನ್ಯಾಯವಾಗಿದೆ ಎಂದು ತುಳುನಾಡ ದೈವಗಳಿಗೆ ದೂರು ಕೊಟ್ಟಿದ್ದಾರೆ.
ಉಡುಪಿಯ ಬಾರ್ಕೂರಿನಲ್ಲಿರುವ ಮಹಾಸಂಸ್ಥಾನಕ್ಕೆ ಬೇಟಿ ನೀಡಿದ್ದ ಮೇಟಿ ಸಂತೋಷ ಗುರೂಜಿಯನ್ನು ಭೇಟಿಯಾದ್ರು. ಅವರ ಸಲಹೆಯಂತೆ ಕುಂಡೋದರ ದೈವದ ಸನ್ನಿಧಿಯಲ್ಲಿ ದೂರು ಕೊಟ್ಟು ಗಂಟೆ ಬಾರಿಸಿದರು.
ಬಳಿಕ ಸುವರ್ಣ ನ್ಯೂಸ್ ಜೊತೆ ಮಾತನಾಡಿ, ನಾನು ಸ್ವಾಮೀಜಿಯ ಭೇಟಿಗೆ ಬಂದಿದ್ದೇನೆ, ಇಲ್ಲಿನ ದೈವಗಳಿಗೆ ಪೂಜೆ ಸಲ್ಲಿಸಿದ್ದೇನೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.