ಕಾಂಗ್ರೆಸ್ ಸಂಬಂಧ ಕಳಚಿಕೊಂಡ ‘ಹಳ್ಳಿ ಹಕ್ಕಿ’

By Suvarna Web DeskFirst Published Jun 20, 2017, 11:09 PM IST
Highlights

. ನಾನುಪಕ್ಷತೊರೆಯಲುಆಡಳಿತಮಾಡುತ್ತಿರುವವರುಕಾರಣವೇವಿನಃಪಕ್ಷವಲ್ಲ.

ರಂಜಾನ್ ಒಳಗೆ ನಾನು ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳ್ತಿನಿ ಅಂತ ಮಾಜಿ ಸಂಸದ ಹೆಚ್.ವಿಶ್ವನಾಥ್ ಪುನರುಚ್ಚರಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೆಲ್ನಲ್ಲಿ ತಮ್ಮ ಬೆಂಬಲಿಗರ ಸಭೆ ನಡೆಸಿದ ಅವರು, ಸಿಎಂ ಸಿದ್ರಾಮಯ್ಯ ವಿರುದ್ಧ ವಾಗ್ದಾಳಿ ಡೆಸಿದರು. ವರ್ಷಗಳ ಹಿಂದೆ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಮಾತನಾಡಿದ್ದೇ, ಸಂದರ್ಶಕರು ಅಕ್ರಮ ಗಣಿಗಾರಿಯಲ್ಲಿ ಸಚಿವರ ಮಕ್ಕಳು ಭಾಗಿಯಾಗಿದ್ದಾರೆ ಅಂತ ಕೇಳಿದ್ರು. ಆ ಟೈಮ್ನಲ್ಲಿ ನಾನು ಆ ಬಗ್ಗೆ ಮಾತನಾಡಿದ್ದನ್ನೇ ಜಿದ್ದು ಸಾಧಿಸಿದ್ದಾರೆ ಅಂತ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ನಾನು ಪಕ್ಷ ತೊರೆಯಲು ಆಡಳಿತ ಮಾಡುತ್ತಿರುವವರು ಕಾರಣವೇ ವಿನಃ ಪಕ್ಷವಲ್ಲ.. ಸಿದ್ದರಾಮಯ್ಯ ಆಡಳಿತ ವೈಖರಿಯಿಂದಾಗಿ 40 ವರ್ಷಗಳ ಸುಧೀರ್ಘ ಕಾಂಗ್ರೆಸ್ ಕೊಂಡಿಯನ್ನ ಕಳೆದುಕೊಳ್ಳುತ್ತಿದ್ದೇನೆ ಅಂತಲೂ ಮಾಜಿ ಸಚಿವರು ಹೇಳಿದರು.

click me!