ಧರ್ಮ ಮೀರಿದ ಮಾನವೀಯತೆ: ಅಯೋಧ್ಯೆಯಲ್ಲಿ ಹಿಂದೂಗಳ ಜಾಗ ಮುಸ್ಲಿಮರಿಗೆ!

Published : Jun 27, 2019, 04:38 PM IST
ಧರ್ಮ ಮೀರಿದ ಮಾನವೀಯತೆ: ಅಯೋಧ್ಯೆಯಲ್ಲಿ ಹಿಂದೂಗಳ ಜಾಗ ಮುಸ್ಲಿಮರಿಗೆ!

ಸಾರಾಂಶ

ಧರ್ಮ ಮೀರಿದ ಮಾನವೀಯತೆ: ಅಯೋಧ್ಯೆಯಲ್ಲಿ ಹಿಂದೂಗಳ ಜಾಗ ಮುಸ್ಲಿಮರಿಗೆ!| ಧರ್ಮಕ್ಕಾಗಿ ಕಿತ್ತಾಡುವವರೆಲ್ಲರಿಗೂ ಮಾನವೀಯತೆಯ ಸಂದೇಶ

ಅಯೋಧ್ಯೆ[ಜೂ.27]: ಅಯೋಧ್ಯೆ ಇವತ್ತಿನವರೆಗೂ ಮಸೀದಿ-ಮಂದಿರದ ತಿಕ್ಕಾಟದಿಂದಲೇ ದೇಶದಾದ್ಯಂತ ಸೌಂಡ್ ಮಾಡಿದೆ. ಆದರೀಗ ಇಲ್ಲಿನ ಹಿಂದೂ-ಮುಸ್ಲಿಂ ಸಹೋದರರ ಮಾನವೀಯ ನಡೆಯೊಂದು ಧರ್ಮಕ್ಕಾಗಿ ಕಿತ್ತಾಡುವವರನ್ನು ತಲೆ ತಗ್ಗಿಸುವಂತೆ ಮಾಡಿದೆ. 

ಇಲ್ಲಿನ ಗೋಸಾಯಿಗಂಜ್ ನ ಬೆಲ್ವಾರಿ ಖಾನ್ ಪ್ರದೇಶದ ಹಿಂದೂಗಳು ಮುಸಲ್ಮಾನರ ಕಬ್ರಿಸ್ತಾನಕ್ಕಾಗಿ ತಮ್ಮ ಭೂಮಿಯನ್ನು ದಾನ ಮಾಡಿದ್ದಾರೆ. ಭೂಮಿ ದಾನ ಮಾಡಿರುವ ರೀಪ್ ದಾಂದ್ ಮಹಾಜನ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ 'ಗೋಸಾಯಿಗಂಜ್ ನಗರ ಹಾಗೂ ಆಸುಪಾಸಿನ ಮುಸಲ್ಮಾನರು ಈ ಭೂಮಿಯನ್ನು ನೂರಾರು ವರ್ಷಗಳಿಂದ ಈ ಭೂಮಿಯನ್ನು ಕಬ್ರಿಸ್ತಾನವನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಮಾಲೀಕತ್ವ ಯಾರಿಗೆ ಎಂಬ ವಿಚಾರದಿಂದ ಎರಡೂ ಸಮುದಾಯಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ. ಆದರೀಗ ಈ ವಿವಾದಕ್ಕೆ ಪೂರ್ಣವಿರಾಮ ಇಡುವ ಸಲುವಾಗಿ ಈ ಭೂಮಿಯನ್ನು ಮುಸಲ್ಮಾನರಿಗೆ ನೀಡಿದೆ' ಎಂದಿದ್ದಾರೆ.

ಪೂರ್ವಜರಿಂದ ಸಿಕ್ಕ ಈ ಭೂಮಿ ವಿಚಾರವಾಗಿ ದೀರ್ಘ ಕಾಲದಿಂದ ನಡೆರಯುತ್ತಿರುವ ಈ ವಿವಾದಕ್ಕೆ ತೆರೆ ಎಳೆಯುವ ಸಲುವಾಗಿ ನ್ಯಾಯಾಲಯದಲ್ಲಿ ಈ ಭೂಮಿಯನ್ನು ಮುಸಲ್ಮಾನರಿಗೆ ಬಿಟ್ಟುಕೊಟ್ಟಿದ್ದೇವೆ' ಎಂದಿದ್ದಾರೆ.

ಹಿಂದೂಗಳ ಈ ನಡೆಯನ್ನು ಶ್ಲಾಘಿಸಿರುವ ಮುಸಲ್ಮಾನ ಸಮುದಾಯದವರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಇದು ಮುಸಲ್ಮಾನರ ಮೇಲೆ ಹಿಂದೂಗಳು ತೋರಿಸಿರುವ ಪ್ರೀತಿಯ ಉದಾಹರಣೆ. ಈ ಸೌಹಾರ್ದತೆ ಯಾವತ್ತಿಗೂ ಉಳಿಯಲಿದೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತದ ಈ ರೈಲಿನಲ್ಲಿ ಊಟಕ್ಕೆ ದುಡ್ಡೇ ಬೇಡ! ಇದು ಉಚಿತ ಊಟ ನೀಡುವ ದೇಶದ ಏಕೈಕ ರೈಲು, ನೀವು ಪ್ರಯಾಣಿಸಿದ್ದೀರಾ?
ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!