ಭಾರತದಲ್ಲಿ ಪ್ರತೀ ವರ್ಷ ಹಾಳಾಗುವ ಆಹಾರದ ಪ್ರಮಾಣ ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಿ

Published : Sep 15, 2016, 05:02 PM ISTUpdated : Apr 11, 2018, 12:51 PM IST
ಭಾರತದಲ್ಲಿ ಪ್ರತೀ ವರ್ಷ ಹಾಳಾಗುವ ಆಹಾರದ ಪ್ರಮಾಣ ಎಷ್ಟು ಗೊತ್ತಾ? ಕೇಳಿದರೆ ಶಾಕ್ ಆಗುತ್ತೀರಿ

ಸಾರಾಂಶ

ಕೃಷಿಯಿಂದ ಮಾರುಕಟ್ಟೆಗೆ ಬರುವಷ್ಟರಲ್ಲಿ 10 ಲಕ್ಷ ಟನ್'ಗಳಷ್ಟು ಈರುಳ್ಳಿ, 22 ಲಕ್ಷ ಟನ್ ಟೊಮೆಟೋ ಹಾಳಾಗುತ್ತವೆ. ಬರೋಬ್ಬರಿ 50 ಲಕ್ಷ ಮೊಟ್ಟೆಗಳು ಒಡೆದುಹೋಗುತ್ತವೆ ಅಥವಾ ಕೆಟ್ಟುಹೋಗುತ್ತವೆ.

ನವದೆಹಲಿ(ಸೆ. 15): ಭಾರತದಲ್ಲಿ ಪ್ರತೀ ವರ್ಷ ಸುಮಾರು 67 ಮಿಲಿಯನ್ ಟನ್'ಗಳಷ್ಟು ಆಹಾರಗಳು ಹಾಳಾಗಿಹೋಗುತ್ತಿವೆ ಎಂಬ ಅಚ್ಚರಿಯ ವರದಿಯೊಂದು ಬಹಿರಂಗಗೊಂಡಿದೆ. 67 ಮಿಲಿಯನ್ ಟನ್, ಅಂದರೆ ಸುಮಾರು 6.7 ಕೋಟಿ ಟನ್, ಅಥವಾ 6,700 ಕೋಟಿ ಕಿಲೋಗಳಷ್ಟು ಆಹಾರಗಳು ಪೋಲಾಗುತ್ತಿವೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ ಈ ಹಾಳಾಗುವ ಆಹಾರಗಳ ಮೌಲ್ಯ ಬರೋಬ್ಬರಿ 92 ಸಾವಿರ ಕೋಟಿ ರೂಪಾಯಿ. ಇಷ್ಟು ಪ್ರಮಾಣದ ಆಹಾರವು ಬ್ರಿಟನ್'ನಂತಹ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಿನದ್ದಾಗಿದೆ. ಕರ್ನಾಟಕದಂತಹ ರಾಜ್ಯಗಳ ಎಲ್ಲ ನಾಗರಿಕರಿಗೂ ಇಡೀ ವರ್ಷ ಉಣಿಸಬಹುದಾದಷ್ಟು ಆಹಾರದ ಪ್ರಮಾಣ ಇದಾಗಿದೆ. ಕೃಷಿ ಇಲಾಖೆಯ ಸಂಶೋಧನಾ ಅಂಗವಾದ ಸಿಫೆಟ್ ಎಂಬ ಸಂಸ್ಥೆಯು ಈ ಅಧ್ಯಯನ ನಡೆಸಿ ಅಂಕಿ-ಅಂಶ ಬಿಡುಗಡೆ ಮಾಡಿದೆ.

ಆಹಾರಗಳು ಹಾಳಾಗುವುದಂದರೇನು?
ರೈತ ಬೆಳೆಯುವ ಜಮೀನಿನಿಂದ ಆರಂಭಗೊಂಡು ಮಾರುಕಟ್ಟೆ ತಲುಪುವಷ್ಟರಲ್ಲಿ ಸಾಕಷ್ಟು ಆಹಾರ ಪದಾರ್ಥಗಳು ಹಾಳಾಗಿಹೋಗುತ್ತವೆ. ಕೊಳೆತು ಹೋಗುವುದು, ಹುಳ ಹಿಡಿಯುವುದು, ಒಡೆದುಹೋಗುವುದು ಇತ್ಯಾದಿ ಹಾನಿ ಸಂಭವಿಸುತ್ತದೆ. ದೇಶದ ಆಹಾರ ಭದ್ರತೆಗೆ ಬಹಳ ಮುಖ್ಯಭಾಗವೆನಿಸಿರುವ ಹಣ್ಣು, ತರಕಾರಿ ಮತ್ತು ಬೇಳೆಕಾಳುಗಳು ಅತೀ ಹೆಚ್ಚು ಹಾಳಾಗುತ್ತವೆ ಎಂದು ಈ ಅಧ್ಯಯನ ತಿಳಿಸುತ್ತದೆ.

ಕೃಷಿಯಿಂದ ಮಾರುಕಟ್ಟೆಗೆ ಬರುವಷ್ಟರಲ್ಲಿ 10 ಲಕ್ಷ ಟನ್'ಗಳಷ್ಟು ಈರುಳ್ಳಿ, 22 ಲಕ್ಷ ಟನ್ ಟೊಮೆಟೋ ಹಾಳಾಗುತ್ತವೆ. ಬರೋಬ್ಬರಿ 50 ಲಕ್ಷ ಮೊಟ್ಟೆಗಳು ಒಡೆದುಹೋಗುತ್ತವೆ ಅಥವಾ ಕೆಟ್ಟುಹೋಗುತ್ತವೆ.

ಸರಿಯಾದ ಸಂಗ್ರಹಣಾ ವ್ಯವಸ್ಥೆ ಇಲ್ಲದಿರುವುದರಿಂದ ಈ ಸಮಸ್ಯೆ ಇದೆ ಎನ್ನಲಾಗಿದೆ. ಆದರೆ, ನಾವು ಅಡುಗೆ ಮಾಡಿ ಉಪಯೋಗಿಸದೇ ಹೊರಗೆ ಬಿಸಾಡುವ ಆಹಾರದ ಪ್ರಮಾಣದ ಬಗ್ಗೆ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ