ಟ್ವಿಸ್ಟ್..! ವೆಂಕಟ್ ಬೇರೇನೋ ಮುಚ್ಚಿಡಲು ರಚನಾ ಹೆಸರು ಹೇಳಿದನಾ?

Published : Jun 19, 2017, 12:04 AM ISTUpdated : Apr 11, 2018, 01:10 PM IST
ಟ್ವಿಸ್ಟ್..! ವೆಂಕಟ್ ಬೇರೇನೋ ಮುಚ್ಚಿಡಲು ರಚನಾ ಹೆಸರು ಹೇಳಿದನಾ?

ಸಾರಾಂಶ

ಚಿಕ್ಕಜಾಲದಲ್ಲಿರೋ ರಮೇಶ್ ಸಮಾಧಿಗೆ ಇಂದು ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ವಾಪಾಸ್ ಬಂದ ಬಳಿಕ ಹುಚ್ಚ ವೆಂಕಟ್ ತನ್ನ ಅತ್ತಿಗೆಯೊಂದಿಗೆ ಜಗಳವಾಡಿದ್ದಾನೆ

ಬೆಂಗಳೂರು(ಜೂ.18) ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಆಸ್ತಿ ವಿಚಾರವಾಗಿ ಮನನೊಂದು ಹುಚ್ಚ ವೆಂಕಟ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಹೌದು ಹುಚ್ಚ ವೆಂಕಟ್ ಅಣ್ಣ ರಮೇಶ್ ಅವರ ಪತ್ನಿಗೂ ಹುಚ್ಚ ವೆಂಕಟ್'ಗೂ ಜಗಳವಾದ ಬೆನ್ನಲ್ಲೇ ಹುಚ್ಚ ವೆಂಕಟ್ ಪಿನಾಯಿಲ್ ಸೇವಿಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ. ಮೂರು ತಿಂಗಳ ಹಿಂದಷ್ಟೇ ಹುಚ್ಚ ವೆಂಕಟ್ ಸಹೋದರ ರಮೇಶ್ ಮೃತಪಟ್ಟಿದ್ದರು. ಇದಕ್ಕೂ ಮೊದಲು ವೆಂಕಟ್ ತನ್ನ ಸಹೋದರ ರಮೇಶ್'ಗೆ ಕಾರು ತೆಗೆಸಿಕೊಟ್ಟಿದ್ದರು. ಅಣ್ಣನ ಸಾವಿನ ಬಳಿಕ ವೆಂಕಟ್ ಕಾರನ್ನು ತೆಗೆದುಕೊಂಡು ಹೋಗಿದ್ದರು. ಈ ವಿಚಾರವಾಗಿ ಹುಚ್ಚ ವೆಂಕಟ್'ಗೂ ಹಾಗೂ ರಮೇಶ್ ಪತ್ನಿಗೂ ಜಗಳವಾಗಿತ್ತು ಎಂದು ಸುವರ್ಣನ್ಯೂಸ್'ಗೆ ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಚಿಕ್ಕಜಾಲದಲ್ಲಿರೋ ರಮೇಶ್ ಸಮಾಧಿಗೆ ಇಂದು ಕುಟುಂಬ ಸಮೇತ ಹೋಗಿ ಪೂಜೆ ಸಲ್ಲಿಸಿ ವಾಪಾಸ್ ಬಂದ ಬಳಿಕ ಹುಚ್ಚ ವೆಂಕಟ್ ತನ್ನ ಅತ್ತಿಗೆಯೊಂದಿಗೆ ಜಗಳವಾಡಿದ್ದಾನೆ. ಆ ಬಳಿಕ ಕುಟುಂಬದ ಜಗಳ ದಿಕ್ಕು ತಪ್ಪಿಸೋಕೆ ವೆಂಕಟ್ ಪ್ರೀತಿಯ ಹೈಡ್ರಾಮ ಆಡಿದ್ದಾನೆ ಎನ್ನಲಾಗುತ್ತಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Glanders disease : ಮಾರಕ ರೋಗದ ಭೀತಿ, ರೇಸ್ ಕೋರ್ಸ್ ಸುತ್ತ ಕತ್ತೆ ಕುದುರೆ ಹೆಸರಗತ್ತೆ ಓಡಾಟಕ್ಕೆ ನಿರ್ಬಂಧ!
'ಎರಡನೆ ಬೆಳೆಗೆ ನೀರಿಲ್ಲ, ಸಸಿ ನಾಟಿ ಮಾಡಬೇಡಿ' ತುಂಗಭದ್ರಾ ರೈತರಿಗೆ ಸಚಿವ ತಂಗಡಗಿ ಅಚ್ಚರಿಯ ಸಲಹೆ!