ಹುಚ್ಚು ಲವ್..! ಆತ್ಮಹತ್ಯೆಗೆ ವೆಂಕಟ್ ಯತ್ನ?

By Suvarna Web DeskFirst Published Jun 18, 2017, 6:06 PM IST
Highlights

ತಾನು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮಗಳಿಗೆ ನೀಡಿದ ಸಂದೇಶದಲ್ಲಿ ವೆಂಕಟ್ ತಿಳಿಸಿದ್ದಾರೆ. ರಿಯಾಲಿಟಿ ಶೋನವೊಂದರಲ್ಲಿ ವೆಂಕಟ್ ಜೊತೆ ಆ ಯುವತಿ ಸಹನಟಿಯಾಗಿದ್ದರು. ಈ ವೇಳೆ, ಆಕೆಯ ಮೇಲೆ ವೆಂಕಟ್'ಗೆ ಲವ್ ಆಗಿತ್ತೆನ್ನಲಾಗಿದೆ.​

ಬೆಂಗಳೂರು(ಜೂನ್ 18): ತನ್ನ ನೇರ ಮಾತು ಮತ್ತು ವಿಚಿತ್ರ ವರ್ತನೆಗಳಿಂದ ಸದಾ ವಿವಾದದಲ್ಲಿರುವ ಹುಚ್ಚ ವೆಂಕಟ್ ಈಗ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಪ್ರೇಮ ವೈಫಲ್ಯದಿಂದ ಹುಚ್ಚ ವೆಂಕಟ್ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ವರದಿಯಾಗಿದೆ. ರಚನಾ ಎಂಬ ಯುವತಿಯನ್ನು ತಾನು ಮನಸಾರೆ ಪ್ರೀತಿಸುತ್ತಿದ್ದು, ಆಕೆಯಿಲ್ಲದೇ ಬದಕಿರಲಾರೆ ಎಂದು ವೆಂಕಟ್ ಹೇಳಿದ್ದಾರೆ. ರಚನಾ ಮನೆಯವರು ತಮ್ಮ ಮದುವೆಗೆ ಒಪ್ಪಿಗೆ ಕೊಡದಿದ್ದರಿಂದ ತಾನು ಫಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಧ್ಯಮಗಳಿಗೆ ನೀಡಿದ ಸಂದೇಶದಲ್ಲಿ ವೆಂಕಟ್ ತಿಳಿಸಿದ್ದಾರೆ.

ಸೂಪರ್ ಜೋಡಿ ಎಂಬ ರಿಯಾಲಿಟಿ ಶೋನಲ್ಲಿ ವೆಂಕಟ್ ಜೊತೆ ಆ ಯುವತಿ ಸಹನಟಿಯಾಗಿದ್ದರು. ಈ ವೇಳೆ, ಆಕೆಯ ಮೇಲೆ ವೆಂಕಟ್'ಗೆ ಲವ್ ಆಗಿತ್ತೆನ್ನಲಾಗಿದೆ. ಆದರೆ, ರಚನಾ ಇದಕ್ಕೆ ಒಪ್ಪಿರಲಿಲ್ಲ. ರಿಯಾಲಿಟಿ ಶೋನಲ್ಲಿ ತಾನು ಫ್ರೆಂಡ್ ರೀತಿಯಷ್ಟೇ ವರ್ತಿಸುತ್ತಿದ್ದೆ. ತಾನ್ಯಾವತ್ತೂ ವೆಂಕಟ್ ಜೊತೆ ಪ್ರೀತಿ ವ್ಯಕ್ತಪಡಿಸಿರಲಿಲ್ಲ ಎಂದು ರಚನಾ ಹೇಳಿದ್ದಾರೆ.

ಇದೇ ವೇಳೆ, ಆತ್ಮಹತ್ಯೆಯ ಬೆದರಿಕೆ ಹಾಕಿರುವ ಹುಚ್ಚ ವೆಂಕಟ್ ಅವರ ಮನೆಗೆ ಯಶವಂತಪುರ ಠಾಣೆಯ ಪೊಲೀಸರು ತೆರಳಿ ಮಾಹಿತಿ ಕಲೆಹಾಕುತ್ತಿದ್ದಾರೆ.

ವೆಂಕಟ್ ಮೆಸೇಜ್ ಏನಿತ್ತು?
ಮಾಧ್ಯಮಗಳಿಗೆ ಹುಚ್ಚ ವೆಂಕಟ್ ಕಳುಹಿಸಿದ ಸಂದೇಶ ಹೀಗಿದೆ:
"Media friends I am suiciding now takeing phenol as i cant forget the girl whom i loved superjodi rachana who loved me now she is saying she will not marry me as her parents dnt agree rachana be happy i cant leave without u rachana i love u kane tel this to her i told huccha venkat here" (ಮಾಧ್ಯಮ ಮಿತ್ರರೇ, ಸೂಪರ್ ಜೋಡಿ ರಚನಾಳನ್ನು ತುಂಬಾ ಪ್ರೀತಿಸುತ್ತಿದ್ದು ಆಕೆಯನ್ನು ಮರೆಯಲು ಸಾಧ್ಯವಿಲ್ಲದ್ದರಿಂದ ನಾನೀಗ ಫಿನಾಯಿಲ್ ಕುಡಿಯುತ್ತಿದ್ದೇನೆ. ರಚನಾ ನನ್ನನ್ನು ಪ್ರೀತಿಸುತ್ತಿದ್ದರೂ ಆಕೆಯ ಪೋಷಕರು ಒಪ್ಪಿಕೊಳ್ಳದಿದ್ದರಿಂದ ಆಕೆಯ ನನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ರಚನಾ ನೀನು ಸಂತೋಷವಾಗಿರು. ನಿನ್ನನ್ನು ಬಿಟ್ಟು ನನಗೆ ಇರಲು ಸಾಧ್ಯವಿಲ್ಲ. ಐ ಲವ್ ಯೂ ಕಣೆ. ನಾನು ಹೀಗೆ ಹೇಳಿದೆ ಅಂದ ಆಕೆಗೆ ತಿಳಿಸಿರಿ)

ವೆಂಕಟ್ ಮತ್ತು ವಿವಾದ:
ನಟಿ ಮತ್ತು ರಾಜಕಾರಣಿ ರಮ್ಯಾರನ್ನು ವಿವಾಹವಾಗಿರುವುದಾಗಿ ಹೇಳುವ ಮೂಲಕ ವೆಂಕಟ್ ಮೊದಲು ವಿವಾದ ಸೃಷ್ಟಿಸಿದ್ದರು. ನಿಜವಾಗಿಯೂ ಹುಚ್ಚನಂತೆ ವರ್ತನೆ ತೋರುವ ಮೂಲಕ ಮಾಧ್ಯಮಗಳ ಕ್ಯಾಮೆರಾಗೆ ಫೋಕಸ್ ಆದರು. ಆನಂತರ, ಅವರ ಹುಚ್ಚ ಸಿನಿಮಾ ರಿಲೀಸ್ ಆದಾಗ ಜನರನ್ನು ಅವರು ನಿಂದಿಸಿ ಮಾತನಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಯಿತು. ಆ ನಂತರ ಅವರು ಮಾಧ್ಯಮಗಳಿಗೆ ಫೋಕಸ್ ಪಾಯಿಂಟ್ ಆದರು. ಇದಾದ ಬಳಿಕ ಬಿಗ್ ಬಾಸ್ ಮನೆ ಪ್ರವೇಶಿಸಿ ಕೆಲ ವಾರಗಳ ಉಳಿದು ತಮ್ಮ ಮ್ಯಾನರಿಸಂನಿಂದ ಜನಪ್ರಿಯತೆ ಸಾಧಿಸಿದರು. ಸಹಸ್ಪರ್ಧಿಯ ಮೇಲೆ ಹಲ್ಲೆ ಮಾಡಿ ಬಿಗ್'ಬಾಸ್'ನಿಂದ ಹೊರಬಿದ್ದರು. ಈ ನಡುವೆ ಅವರ ಸಾಂಸಾರಿಕ ಜೀವನ ಕೂಡ ವಿವಾದಕ್ಕೆ ಕಾರಣವಾಗಿತ್ತು.

click me!