
ತುಮಕೂರು(ನ.30): ಫೈನಾನ್ಸ್ ಕಂಪನಿಯೊಂದು ಸಾಲ ಮರುಪಾವತಿ ಮಾಡಿಕೊಳ್ಳುವಾಗ ಹಳೆಯ 500 ರೂ ನೋಟನ್ನು ತೆಗೆದುಕೊಂಡಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರದಲ್ಲಿ ನಡೆದಿದೆ.
ಶಾಹಿನಾ ಭಾನು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಲ್ಲಿನ ಮಾವಿನ ತೋಪಿನಲ್ಲಿರುವ ಗ್ರಾಮೀಣ ಕೂಟ ಫೈನಾನ್ಸ್ ಸರ್ವಿಸ್ ನಲ್ಲಿ ಒಟ್ಟು 45 ಸಾವಿರ ರೂ ಸಾಲ ಮಾಡಿದ್ದರು. ಪ್ರತಿ ವಾರ 800 ರೂ ಸಾಲದ ಕಂತು ಕಟ್ಟಬೇಕಿತ್ತು. 500 ರೂ ನೋಟು ಚಲಾವಣೆ ಆಗದ ಕಾರಣ ಕಳೆದ ಎರಡು ವಾರದಿಂದ ಕಂತು ತುಂಬಲು ಸಾಧ್ಯವಾಗಿರಲಿಲ್ಲ. ನಿನ್ನೆ ಕಂತು ಕಟ್ಟಲು 500 ರೂ ನೋಟು ಹಾಗೂ 100 ರು ಮಖಬೆಲೆಯ 2 ನೋಟನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ, ಫೈನಾನ್ಸ್`ನವರು 500 ರೂಪಾಯಿ ನೋಟನ್ನು ತಿರಸ್ಕರಿಸಿದ್ದಾರೆ. ಶಾಹಿನಾ ಪರಿಚಯಸ್ಥರಲ್ಲಿ ಹಾಗೂ ಅಂಗಡಿಗಳಲ್ಲಿ ಚೆಂಜ್ ಕೇಳಿದ್ದಾರೆ. ಎಲ್ಲೂ ಸಿಗದೇ ಇದ್ದಾಗ ಮನೆಗೆ ವಾಪಸ್ ಆಗಿದ್ದಾರೆ. ಆದರೆ, ಫೈನಾನ್ಸ್`ನವರು ಶಾಹಿನಾ ಭಾನು ಮನೆ ತನಕ ಬಂದು ಪುನಃ ಸಾಲದ ಕಂತು ಕೇಳಿದ್ದಾರೆ. ಇದರಿಂದ ಮನನೊಂದ ಶಾಹಿನಾ ನೇಣಿಗೆ ಶರಣಾಗಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.