ಮೂತ್ರಪಿಂಡದ ಕಲ್ಲುಗಳ ನಿವಾರಣೆಗಾಗಿ ಮನೆಮದ್ದು

Published : Sep 10, 2016, 10:56 AM ISTUpdated : Apr 11, 2018, 12:57 PM IST
ಮೂತ್ರಪಿಂಡದ ಕಲ್ಲುಗಳ ನಿವಾರಣೆಗಾಗಿ ಮನೆಮದ್ದು

ಸಾರಾಂಶ

ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಸಾಮಾನ್ಯ ಕಾರಣಗಳು: ಮೂತ್ರದ ಸೋಂಕು, ಡಿ ಜೀವಸತ್ವದ ವಿಪರೀತ ಸೇವನೆ, ದೇಹದಲ್ಲಿ ಖನಿಜಗಳ ಅಸಮತೋಲನ, ಡಿಹೈಡ್ರೇಶನ್ ( ನಿರ್ಜಲೀಕರಣ), ಸಂಧಿವಾತ, ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾಡುವ ಡಯಟ್

ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ರೋಗ ಎಂದರೆ ಮೂತ್ರಪಿಂಡದ ಕಲ್ಲು. ಈ ಮೂತ್ರ ಪಿಂಡದ ಕಲ್ಲಿನ ಕುರಿತು ಇಲ್ಲಿದೆ ನಿಮಗೊಂದಿಷ್ಟು ಮಾಹಿತಿ.

ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಸಾಮಾನ್ಯ ಕಾರಣಗಳು: ಮೂತ್ರದ ಸೋಂಕು, ಡಿ ಜೀವಸತ್ವದ ವಿಪರೀತ ಸೇವನೆ, ದೇಹದಲ್ಲಿ ಖನಿಜಗಳ ಅಸಮತೋಲನ, ಡಿಹೈಡ್ರೇಶನ್ ( ನಿರ್ಜಲೀಕರಣ), ಸಂಧಿವಾತ, ತೂಕ ಇಳಿಸಿಕೊಳ್ಳುವುದಕ್ಕಾಗಿ ಮಾಡುವ ಡಯಟ್

ಮೂತ್ರಪಿಂಡದ ಕಲ್ಲುಗಳ ನಿವಾರಣೆಗಾಗಿ ಮನೆಮದ್ದು:

ತುಳಸಿ ಎಲೆಗಳು: 2-3 ತುಳಸಿ ಎಲೆಗಳ ಜೊತೆ 1 ಚಮಚ ಜೇನು ಸೇರಿಸಿ ರಸ ತೆಗೆದು ಪ್ರತಿ ದಿನ ಬೆಳಗ್ಗೆ ಸೇವನೆ ಮಾಡುವುದರಿಂದ ಮೂತ್ರಪಿಂಡದ ಕಲ್ಲುಗಳು ನಿವಾರಣೆಯಾಗುತ್ತದೆ.

ಕಲ್ಲಂಗಡಿ ಹಣ್ಣು: ಕಲ್ಲಂಗಡಿಯಲ್ಲಿ ಇರುವ ಪೊಟ್ಯಾಷಿಯಂ ಮೂತ್ರಪಿಂಡದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಲ್ಲಂಗಡಿ ಹಣ್ಣನ್ನು ಸೇವಿಸದುವುದು ಅಥವಾ ಅದರ ರಸ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಾಶ ಮಾಡಬಹುದು.

ಅಂಜೂರದ ಹಣ್ಣುಗಳು: ಎರಡು ಅಂಜೂರದ ಹಣ್ಣುಗಳನ್ನು ಒಂದು ಲೋಟ ನೀರಿನೊಂದಿಗೆ ಹಾಕಿ ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ನಾಶ ಮಾಡಬಹುದು.

ಟೊಮೆಟೋ ರಸ: ಉಪ್ಪು ಮತ್ತು ಚಿಟಕೆ ಮೆಣಸನ್ನು ಬೀಜ ತೆಗೆದ ಟೊಮೆಟೋ ರಸದ ಜೊತೆ ಬೆರೆಸಿ ಪ್ರತಿ ನಿತ್ಯ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳನ್ನು ಹೋಗಲಾಡಿಸಬಹುದು.

ನೀರು: ಪ್ರತಿನಿತ್ಯ ಹೆಚ್ಚು ನೀರನ್ನು ಸೇವಿಸಬೇಕು. ನೀರು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದನ್ನು ತಪ್ಪಿಸುತ್ತದೆ.

ನಿಂಬೆ ರಸ: ಪ್ರತಿನಿತ್ಯ ದನ್ನು ಸೇವನೆ ಮಾಡುವುದರಿಂದ ಮೂತ್ರವಿಸರ್ಜನೆ ಸರಾಗವಾಗಿ ಆಗುತ್ತದೆ. ಇದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗುವುದು ತಪ್ಪುತ್ತದೆ.

ಆಹಾರ: ಸೇವಿಸುವ ಆಹಾರದಲ್ಲಿ ಹೆಚ್ಚು ಬೀಟ್ರೂಟ್, ಕ್ಯಾರೆಟ್, ಹೂಕೋಸು, ಬಾದಾಮಿ, ತೆಂಗಿನಕಾಯಿ, ಅವರೆಕಾಳು, ಇಂತಹ ಆಹಾರಗಳನ್ನು ಸೇವಿಸಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2019ರಲ್ಲಿ 6 ಸಾವಿರಕ್ಕೆ ಕೆಲಸ, ಕೆಪಿಎಸ್ಸಿ ಸದಸ್ಯನಾದ ಬಳಿಕ 100 ಎಕರೆ ಜಮೀನು: ಇದು 'ನುಂಗಪ್ಪ' ಸಾಹುಕಾರ್‌ ಸ್ಟೋರಿ
3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು, ಖಾಸಗಿ ಶಾಲೆಗಳ ಮಾದರಿ ಡಿಜಿಟಲ್‌ ಶಿಕ್ಷಣಕ್ಕೆ ಸರ್ಕಾರ ಸಿದ್ಧತೆ