ಇಲ್ಲಿನ ಮಸೀದಿಯಲ್ಲಿ ನಿತ್ಯ 5 ಬಾರಿ ಹಿಂದುಗಳ ನಮಾಜ್‌!

Published : Sep 09, 2019, 07:48 AM ISTUpdated : Sep 09, 2019, 09:04 AM IST
ಇಲ್ಲಿನ ಮಸೀದಿಯಲ್ಲಿ ನಿತ್ಯ 5 ಬಾರಿ ಹಿಂದುಗಳ ನಮಾಜ್‌!

ಸಾರಾಂಶ

ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಮಸೀದಿ ಇದೆ. ಅಲ್ಲಿ ಹಿಂದುಗಳು ನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ! 200 ವರ್ಷಗಳಿಂದಲೂ ಗ್ರಾಮಸ್ಥರು ಮಸೀದಿ ನೋಡಿಕೊಳ್ಳುತ್ತಿದ್ದಾರೆ. 

ಪಟನಾ [ಸೆ.09]: ದೇಶದ ವಿವಿಧೆಡೆ ಧರ್ಮದ ಹೆಸರಿನಲ್ಲಿ ಆಗಾಗ್ಗೆ ಸಂಘರ್ಷ, ಗಲಭೆ ಸಾಮಾನ್ಯವಾಗಿರುವಾಗಲೇ ಸಾಮಾಜಿಕ ಹಾಗೂ ಧಾರ್ಮಿಕ ಸೌಹಾರ್ದ ಸಾರುವ ಸಂಪ್ರದಾಯವೊಂದು ಬಿಹಾರದಲ್ಲಿ ಪಾಲನೆಯಾಗುತ್ತಿದೆ. ಇಲ್ಲಿನ ನಳಂದಾ ಜಿಲ್ಲೆಯ ಗ್ರಾಮವೊಂದರಲ್ಲಿ ಮುಸ್ಲಿಮರೇ ಇಲ್ಲದಿದ್ದರೂ ಮಸೀದಿ ಇದೆ. ಅಲ್ಲಿ ಹಿಂದುಗಳು ನಿತ್ಯ 5 ಬಾರಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ!

ನಂಬಲು ತುಸು ಕಷ್ಟವಾದರೂ ಇದು ನಿಜ. ನಳಂದಾ ಜಿಲ್ಲೆಯ ಮಾಧಿ ಎಂಬ ಗ್ರಾಮದಲ್ಲಿ ಈ ಹಿಂದೆ ಸಾಕಷ್ಟುಸಂಖ್ಯೆಯಲ್ಲಿ ಮುಸ್ಲಿಮರು ನೆಲೆಸಿದ್ದರು. ಕಾಲ ಕಾಲಕ್ಕೆ ಅವರು ವಲಸೆ ಹೋಗಿದ್ದರಿಂದ ಮಾಧಿಯಲ್ಲಿ ಮುಸ್ಲಿಮರು ಇಲ್ಲ. ಆದರೆ 200 ವರ್ಷಗಳಷ್ಟುಹಳೆಯದಾದ ಮಸೀದಿ ಇದೆ. ಅದನ್ನು ಪಾಳು ಬೀಳದಂತೆ ನಿರ್ವಹಿಸುತ್ತಿರುವ ಹಿಂದುಗಳು ನಿತ್ಯ 5 ಬಾರಿ ತಾವೇ ನಮಾಜ್‌ ಮಾಡುತ್ತಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೊಘಲ್ ವಂಶಸ್ಥನಿಂದ ಚಿನ್ನದ ಇಟ್ಟಿಗೆ!

ನಮಾಜ್‌ ಮಾಡುವಾಗ ಆಜಾನ್‌ ಕೇಳಬೇಕು ಎಂಬ ಕಾರಣಕ್ಕೆ ಪೆನ್‌ಡ್ರೈವ್‌ ಸಹಾಯದಿಂದ ರೆಕಾರ್ಡೆಡ್‌ ಆಜಾನ್‌ ಮೊಳಗಿಸುತ್ತಾರೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ಹಿಂದುಗಳು ಈ ಮಸೀದಿಗೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಮಸೀದಿಯನ್ನು ಸ್ವಚ್ಛಗೊಳಿಸುತ್ತಾರೆ. ಸಮಸ್ಯೆ ಎದುರಾದಾಗ ಮಸೀದಿಗೆ ಹೋಗಿ ನಿವೇದಿಸಿಕೊಳ್ಳುತ್ತಾರೆ ಎಂದು ಗ್ರಾಮದ ಅರ್ಚಕ ಜಾನಕಿ ಪಂಡಿತ್‌ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಸ್ಲಿಮರು ಗ್ರಾಮ ತೊರೆದ ಬಳಿಕ ಮಸೀದಿಯನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಹೀಗಾಗಿ ಹಿಂದುಗಳೇ ಈ ಹೊಣೆ ಹೊತ್ತುಕೊಂಡಿದ್ದೇವೆ ಎಂದು ಮಸೀದಿಯನ್ನು ನಿರ್ವಹಿಸುತ್ತಿರುವ ಗೌತಮ್‌ ಎಂಬುವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ