ಹೆತ್ತವರ ದೂರಮಾಡಲು ಯತ್ನಿಸುವ ಪತ್ನಿಗೆ ವಿಚ್ಛೇದನೆ

Published : Oct 08, 2016, 02:44 AM ISTUpdated : Apr 11, 2018, 12:48 PM IST
ಹೆತ್ತವರ ದೂರಮಾಡಲು ಯತ್ನಿಸುವ ಪತ್ನಿಗೆ ವಿಚ್ಛೇದನೆ

ಸಾರಾಂಶ

ವಯಸ್ಸಾದ ಹೆತ್ತವರಿಂದ ಮಗ​ನನ್ನು ದೂರ ಮಾಡಲು ಯತ್ನಿಸಿದರೆ, ಅಂತಹ ಪತ್ನಿಗೆ ವಿಚ್ಛೇದನ ನೀಡಬ​ಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ, ಮದುವೆಯಾದ ಬಳಿಕ ಪುತ್ರ ತಮ್ಮಿಂದ ದೂರವಾಗುತ್ತಾನೆ ಎಂಬ ಪೋಷಕರ ಆತಂಕವನ್ನೂ ನ್ಯಾಯಾಲಯ ದೂರ ಮಾಡಿದೆ. 

ನವದೆಹಲಿ (ಅ.08): ಪತ್ನಿಯರೇ ಹುಷಾರ್‌! ನಿಮ್ಮ ಪತಿ​ಯನ್ನು ಅವರ ಹೆತ್ತವರಿಂದ ದೂರ ಮಾಡಬೇಕೆಂಬ ಸಣ್ಣ ಯೋಚನೆ​ಯನ್ನೂ ನೀವಿನ್ನು ಮಾಡುವಂತಿಲ್ಲ. ಅಂತಹ ಪ್ರಯತ್ನವನ್ನೇನಾದರೂ ಮಾಡಿದಲ್ಲಿ, ನಿಮ್ಮ ಪತಿ ನಿಮಗೆ ವಿಚ್ಛೇದನ ನೀಡಬಹುದು. 

ವಯಸ್ಸಾದ ಹೆತ್ತವರಿಂದ ಮಗ​ನನ್ನು ದೂರ ಮಾಡಲು ಯತ್ನಿಸಿದರೆ, ಅಂತಹ ಪತ್ನಿಗೆ ವಿಚ್ಛೇದನ ನೀಡಬ​ಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈ ಮೂಲಕ, ಮದುವೆಯಾದ ಬಳಿಕ ಪುತ್ರ ತಮ್ಮಿಂದ ದೂರವಾಗುತ್ತಾನೆ ಎಂಬ ಪೋಷಕರ ಆತಂಕವನ್ನೂ ನ್ಯಾಯಾಲಯ ದೂರ ಮಾಡಿದೆ. 

1992ರಲ್ಲಿ ವಿವಾಹವಾಗಿದ್ದ ಕರ್ನಾ​ಟಕ ಮೂಲದ ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ‘‘ ಹಿಂದೂ ಸಂಪ್ರದಾಯದ ಪ್ರಕಾರ, ಮದುವೆಯಾದ ಬಳಿಕ ಮಹಿ​ಳೆ​ಯು ಪತಿಯ ಕುಟುಂಬದ ಅವಿ​ಭಾಜ್ಯ ಅಂಗವಾಗಿರುತ್ತಾಳೆ.

ಅಂಥ ಸ್ಥಾನದಲ್ಲಿರುವ ಆಕೆ ಪತಿಯ ಆದಾಯವನ್ನು ತಾನೊಬ್ಬಳೇ ಅನು​ಭವಿ​ಸಬೇಕೆಂಬ ಹಂಬಲದಿಂದ ಕುಟುಂಬವನ್ನು ಬೇರ್ಪಡಿಸುವುದು ಸರಿಯಲ್ಲ,'' ಎಂದು ನ್ಯಾಯಮೂರ್ತಿ​ಗಳಾದ ಅನಿಲ್‌ ಆರ್‌. ದವೆ ಮತ್ತು ಎಲ್‌. ನಾಗೇ​ಶ್ವರರಾವ್‌ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಆ ಕಾರಣಕ್ಕಾಗಿ ಪತಿ​ಯನ್ನು ಆತನ ಪೋ ಷ​​ಕ​ರಿಂದ ಪ್ರತ್ಯೇಕಗೊಳಿಸಲು ಯತ್ನಿಸುವ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ‘‘ವಿವಾಹದ ಬಳಿಕ ಪತಿಯನ್ನು ತಂದೆ-ತಾಯಿ​ಯಿಂದ ಬೇರ್ಪಡಿ​ಸುವುದು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ. ಮಗುವನ್ನು ಹೆತ್ತು, ಸಾಕಿ, ಸಲುಹಿ, ವಿದ್ಯಾ​ಭ್ಯಾಸ ಕೊಡಿಸಲು ಪೋಷಕರು ಸಾಕಷ್ಟುಶ್ರಮ ವಹಿಸಿರು​ತ್ತಾರೆ. ವಯಸ್ಸಾದ ಪೋಷಕರು ತಮ್ಮ ಖಚು​ರ್‍- ವೆಚ್ಚಗಳನ್ನು ಪುತ್ರ ನಿಭಾಯಿಸುತ್ತಾನೆ ಎಂಬ ನಂಬಿಕೆ ಇಟ್ಟಿರುತ್ತಾರೆ. ಹಾಗಾಗಿ, ಮದುವೆ​ಯಾದ ಬಳಿಕವೂ ವಯಸ್ಸಾದ ಪೋಷಕರನ್ನು ರಕ್ಷಣೆ ಮಾಡುವುದು ಮಗನ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆ,'' ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!