
ಲಖನೌ (ಡಿ.18): ಹಿಂದೂ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಕ್ರಿಸ್ಮಸ್ ಆಚರಿಸದಂತೆ ಹಿಂದೂ ಸಂಘಟನೆಯೊಂದು, ರಾಜ್ಯದಲ್ಲಿ ಕ್ರೈಸ್ತ ಸಂಸ್ಥೆಗಳ ಆಡಳಿತ ಹೊಂದಿರುವ ಶಾಲೆಗಳಿಗೆ ಸೂಚಿಸಿದೆ.
ಸಿಎಂ ಯೋಗಿ ಅವರ ಹಿಂದೂ ಯುವವಾಹಿನಿ ಜೊತೆ ನಂಟಿರುವ ಹಿಂದೂ ಜಾಗರಣ್ ಮಂಚ್ ಎಂಬ ಸಂಘಟನೆ ಇಂಥದ್ದೊಂದು ಸೂಚನೆ ನೀಡಿದೆ. ಕ್ರಿಸ್ಮಸ್ ವೇಳೆ ಶಾಲೆಗೆ ಆಟಿಕೆ ತಂದು ಹಬ್ಬ ಆಚರಿಸುವಂತೆ ಶಾಲಾ ಆಡಳಿತ ಮಂಡಳಿಗಳು ಸೂಚಿಸಿದ್ದವು.
ಇದು ಮತಾಂತರರ ಆರಂಭದ ಹಂತ. ಹೀಗಾಗಿ ಇಂಥ ಸೂಚನೆ ಅನಿವಾರ್ಯವಾಗಿತ್ತು ಎಂದು ಸಂಘಟನೆಯ ಅಧ್ಯಕ್ಷ ಸೋನು ಸವಿತಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.