ಗಾಂಧೀಜಿ ಕೊನೆಯದಾಗಿ 'ಹೇ ರಾಮ್' ಎಂದರಾ?

Published : Jan 31, 2018, 12:20 PM ISTUpdated : Apr 11, 2018, 12:51 PM IST
ಗಾಂಧೀಜಿ ಕೊನೆಯದಾಗಿ 'ಹೇ ರಾಮ್' ಎಂದರಾ?

ಸಾರಾಂಶ

‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರ ಅಂದಿನ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ (96) ಹೇಳಿದ್ದಾರೆ ಎಂಬುದು 2006 ರಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿರಲಿಲ್ಲ. ತಮ್ಮ ಹೇಳಿಕೆಯನ್ನು ಅಂದು ತಪ್ಪಾಗಿ ಅರ್ಥೈಸಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಕಲ್ಯಾಣಂ ಸ್ಪಷ್ಟಪಡಿಸಿದ್ದಾರೆ.

ಚೆನ್ನೈ (ಜ.31): ‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರ ಅಂದಿನ ಆಪ್ತ ಕಾರ್ಯದರ್ಶಿ ವೆಂಕಿಟ ಕಲ್ಯಾಣಂ (96) ಹೇಳಿದ್ದಾರೆ ಎಂಬುದು 2006 ರಲ್ಲಿ ದೊಡ್ಡ ಸುದ್ದಿಯಾಗಿತ್ತು. ಆದರೆ ತಾವು ಹಾಗೆ ಹೇಳಿರಲಿಲ್ಲ. ತಮ್ಮ ಹೇಳಿಕೆಯನ್ನು ಅಂದು ತಪ್ಪಾಗಿ ಅರ್ಥೈಸಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಕಲ್ಯಾಣಂ ಸ್ಪಷ್ಟಪಡಿಸಿದ್ದಾರೆ.

ಗಾಂಧಿ ಹತ್ಯೆಯ ದಿನವಾದ ಜ.30 ರಂದು ಪಿಟಿಐ ಸುದ್ದಿ ಸಂಸ್ಥೆಯ ಜತೆ ಮಾತನಾಡಿದ ಕಲ್ಯಾಣಂ, ‘ಗಾಂಧೀಜಿ ‘ಹೇ ರಾಮ್’ ಎಂದು ಹೇಳಲಿಲ್ಲ ಎಂದು ನಾನು ಹೇಳಿಲ್ಲ. ಆ ಸಂದರ್ಭದಲ್ಲಿ ಗಾಂಧೀಜಿb‘ಹೇ ರಾಮ್’ ಎಂದು ಹೇಳಿದ್ದು ನನಗೆ ಕೇಳಿಲ್ಲ. ಅವರು ಹೇ ರಾಮ್ ಎಂದು ಹೇಳಿರಲೂಬಹುದು. ಆದರೆ ನನಗಂತೂ ಕೇಳಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಗಾಂಧೀಜಿಯವರು ಸಾಯುವ ಸಂದರ್ಭದಲ್ಲಿ ‘ಹೇ ರಾಮ್’ ಎಂಬ ನುಡಿಗಳನ್ನು ಹೇಳಿಲ್ಲ’ ಎಂದು ಅವರು 2006 ರಲ್ಲಿ ಕೇರಳದ ಕೊಲ್ಲಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಕಲ್ಯಾಣಂ ಹೇಳಿಕೆಯನ್ನು ಗಾಂಧೀಜಿ ಮೊಮ್ಮಗ ತುಷಾರ್ ಗಾಂಧಿ ತಿರಸ್ಕರಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!