ಈ ದೇವಾಲಯದಲ್ಲಿ ನಿಮ್ಮ ಬೈಕ್ ಪೂಜೆ ಮಾಡೋಕೆ ಹೊಸ ಕಂಡಿಶನ್

Published : Jan 17, 2018, 07:26 AM ISTUpdated : Apr 11, 2018, 01:02 PM IST
ಈ ದೇವಾಲಯದಲ್ಲಿ ನಿಮ್ಮ ಬೈಕ್ ಪೂಜೆ ಮಾಡೋಕೆ ಹೊಸ ಕಂಡಿಶನ್

ಸಾರಾಂಶ

ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಸರ್ಕಾರ ಸಾಕಷ್ಟು ಅಭಿಯಾನ ನಡೆಸುತ್ತದೆ. ಅದಕ್ಕೆ ಒಡಿಶಾ ಪೊಲೀಸರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಭುವನೇಶ್ವರ: ಬೈಕ್ ಸವಾರರು ಹೆಲ್ಮೆಟ್ ಧರಿಸುವಂತೆ ಸರ್ಕಾರ ಸಾಕಷ್ಟು ಅಭಿಯಾನ ನಡೆಸುತ್ತದೆ. ಅದಕ್ಕೆ ಒಡಿಶಾ ಪೊಲೀಸರು ಈಗ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಇಲ್ಲಿನ ಜಗತ್‌ಸಿಂಗ್‌ಪುರ ಜಿಲ್ಲೆಯಲ್ಲಿ ಬೈಕ್ ಸವಾರರು ಹೆಲ್ಮೆಟ್ ಹೊಂದಿಲ್ಲದಿದ್ದರೆ, ಅವರ ಬೈಕ್‌ಗಳ ಪೂಜೆ ಮಾಡಲ್ಲ ಎಂಬ ನಿರ್ಣಯವನ್ನು ಅರ್ಚಕರು ಕೈಗೊಳ್ಳುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಗತ್‌ಸಿಂಗ್‌ಪುರ, ಕಟಕ್ ಮತ್ತು ಪುರಿ ಜಿಲ್ಲೆಗಳಲ್ಲಿ ಅಪಾರ ಭಕ್ತರನ್ನು ಹೊಂದಿದ 1,000 ವರ್ಷ ಹಳೆಯ ಮಾಸರಳಾ ದೇವಸ್ಥಾನದ ಅರ್ಚಕರು ಈ ತೀರ್ಮಾನ ಕೈಗೊಂಡಿದ್ದಾರೆ. ಹೊಸ ಬೈಕ್ ಖರೀದಿಸಿದವರು ಈ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸುರಕ್ಷಿತ ಚಾಲನೆಗಾಗಿ ಪ್ರಾರ್ಥಿಸುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜನರ ಬಾಯಿ ಮುಚ್ಚಿಸಲು ದ್ವೇಷ ಭಾಷಣ ಮಸೂದೆ ಜಾರಿ: ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿ
ನದಿ ಜೋಡಣೆ-ನೀರಾವರಿ ಚರ್ಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿಗೆ: ಎಐಸಿಸಿ ನಾಯಕರ ಭೇಟಿ ಸಾಧ್ಯತೆ