
ಮೈಸೂರು(ಸೆ.26): ಜಂಬೂ ಸವಾರಿ ದಿನ ಅರಮನೆ ಮೇಲೆ ಹೆಲಿಕಾಪ್ಟರ್ ಹಾರಟವನ್ನು ರದ್ದು ಮಾಡಲಾಗಿದೆ.
ಜಂಬೂ ಸವಾರಿಯ ಆನೆಗಳು ಹೆಲಿಕಾಪ್ಟರ್ ಸದ್ದಿಗೆ ಹೆದರುವುದರಿಂದ ಸೆಪ್ಟಂಬರ್ 30 ರಂದು ಅಂಬಾವಿಲಾಸ ಅರಮನೆ ಮೇಲೆ ಹೆಲಿಕಾಪ್ಟರ್ ಹಾರಾಟವನ್ನು ರದ್ದು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ಹೇಳಿದ್ದಾರೆ.
ಈ ಬಗ್ಗೆ ನಿಮ್ಮ ಸುವರ್ಣ ನ್ಯೂಸ್ ಸುದ್ದಿ ಪ್ರಸಾರ ಮಾಡಿತ್ತು. ಆಕಾಶ ದಸರಾ ಕಾರ್ಯಕ್ರಮದ ಅಡಿಯಲ್ಲಿ ನಿತ್ಯ ಹೆಲಿಕಾಪ್ಟರ್'ಗಳು ಅರಮನೆ ಮೇಲೆ ಹಾರಾಟ ನಡೆಸುವುದು ಜಂಬೂ ಸವಾರಿ ಆನೆಗಳಿಗೆ ತೊಂದರೆಯಾಗುತ್ತಿದ್ದು, ಇದು ಜಂಬೂ ಸವಾರಿ ಮೇಲೆ ಪರಿಣಾಮ ಬೀರಲಿದೆ ಎಂದು ಅರಣ್ಯ ಅಧಿಕಾರಿಗಳ ಮಾಹಿತಿ ಮೇರೆಗೆ ಸುದ್ದಿ ಪ್ರಸಾರ ಮಾಡಿತ್ತು. ಈಗ ನಮ್ಮ ವರದಿಗೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಜಂಬೂ ಸವಾರಿ ದಿನ ಅರಮನೆ ಮೇಲೆ ಯಾವುದೇ ಹೆಲಿಕಾಪ್ಟರ್ ಹಾರಾಟ ನಡೆಸಲು ಅವಕಾಶ ಇಲ್ಲ ಎಂದಿದ್ದಾರೆ. ಹೀಗಾಗಿಯೇ ಸೆಪ್ಟಂಬರ್ 29 ರಂದೇ ವಾಯುಸೇನೆಯ ಹೆಲಿಕಾಪ್ಟರ್'ಗಳು ಸಾಹಸ ಪ್ರದರ್ಶನಗಳನ್ನು ನಡೆಸಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.