ಮಹಾ ಮುಂಗಾರಿಗೆ ಉತ್ತರ ಕರ್ನಾಟಕ ತತ್ತರ

By Internet DeskFirst Published Sep 23, 2016, 12:07 PM IST
Highlights

ಬೀದರ್ (ಸೆ.23): ಉತ್ತರ ಕರ್ನಾಟಕದಾದ್ಯಂತ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಬೀದರ್ ನಲ್ಲಿ ಬೆಂಬಿಡದೇ ಮಳೆ ಸುರಿತಾ ಇದೆ.

ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

Latest Videos

ನಗರದ ನಂದಿ ಕಾಲೋನಿ, ಶಹಗಂಜ್ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯನ್ನುಂಟು ಮಾಡಿದೆ. ಸೋಯಾ, ಉದ್ದು ಬೆಳೆದಿದ್ದ ರೈತರಿಗೆ ನಷ್ಟವಾಗಿದೆ.

ಕೃಷ್ಣೆ ಉಕ್ಕಿ ಹರಿಯುತ್ತಿದ್ದು ಮಹಾ ಮುಂಗಾರಿಗೆ ಉತ್ತರ ಕರ್ನಾಟಕ ತತ್ತರಿಸಿದೆ.  

click me!