ಬೀದರ್`ನಲ್ಲಿ ವರುಣನ ಆರ್ಭಟ: ಮೋಳಗೆ ಮಾರಯ್ಯ ಗುಹೆಯ ಶಿವಲಿಂಗಕ್ಕೂ ಜಲಾಭಿಷೇಕ

Published : Sep 24, 2016, 02:13 PM ISTUpdated : Apr 11, 2018, 12:38 PM IST
ಬೀದರ್`ನಲ್ಲಿ ವರುಣನ  ಆರ್ಭಟ: ಮೋಳಗೆ ಮಾರಯ್ಯ ಗುಹೆಯ ಶಿವಲಿಂಗಕ್ಕೂ ಜಲಾಭಿಷೇಕ

ಸಾರಾಂಶ

ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದ ಮೋಳಗೆ ಮಾರಯ್ಯಗುಹೆಯ ಶಿವಲಿಂಗ ಸಂಪೂರ್ಣ ಮುಳುಗಿ ಹೋಗಿವೆ

ಬೀದರ್(ಸೆ.24): ಉತ್ತರ ಕರ್ನಾಟಕದಲ್ಲಿ ಉತ್ತರೆ ಮಳೆಯ ಆರ್ಭಟ ಜೋರಾಗಿದೆ. ಬಾನಿಗೆ ತೂತು ಬಿದ್ದಂತೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಸಲಧಾರೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಬೀದರ್ ಜಿಲ್ಲೆಯ ಧಾರಾಕಾರ ಮಳೆಗೆ ಹತ್ತಾರು ಗ್ರಾಮಗಳು ಜಲಾವೃತಗೊಂಡಿದ್ದು  ಪ್ರವಾಹದ ಸ್ಥಿತಿ ಏರ್ಪಟ್ಟಿದೆ.

ಭಾಲ್ಕಿ ತಾಲೂಕಿನ ದಾಡಗಿ ಸೇತುವೆ ಮುಳುಗಡೆಯಾಗಿದ್ದು  ಹುಮನಾಬಾದ್​ ಭಾಲ್ಕಿ ಸಂಚಾರ ಸ್ತಬ್ಧವಾಗಿದೆ..

ರಸ್ತೆಗಳಲ್ಲಿ, ಮನೆಗಳ ಮುಂದೆ, ಮೊಣಕಾಲಿನವರೆಗೆ ನೀರು ಹರೀತಿದೆ. ಮನೆಯೊಳಗೆ ನೀರು ನುಗ್ಗಿ, ಪಾತ್ರೆ ಸಾಮಾನುಗಳು ತೇಲಿಹೋಗಿವೆ. ಮಹಿಳೆಯರು, ವೃದ್ಧರು, ಮಕ್ಕಳು ಕೂಡ ನೀರಿನಲ್ಲೇ ಚೇರ್ ಹಾಕಿಕೊಂಡು ಕೂತು, ಪಾತ್ರೆಗಳಲ್ಲಿ ನೀರನ್ನ ಹೊರ ಚೆಲ್ಲುತ್ತಿದ್ದಾರೆ.

ಇತ್ತ, ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದ ಮೋಳಗೆ ಮಾರಯ್ಯಗುಹೆಯ ಶಿವಲಿಂಗ ಸಂಪೂರ್ಣ ಮುಳುಗಿ ಹೋಗಿವೆ. ಮುಂಗಾರು ಮುಗಿಯುವ ಮೊದಲ ಸುರೀತಿರೋ ಭಾರೋ ಮಳೆಯಿಂದಾಗಿ ಅಂತರ್ಜಲದ ಮಟ್ಟ ಹೆಚ್ಚಾಗಿದೆ. ಶಿವಲಿಂಗ ಹತ್ರ ಭೂಮಿಯಿಂದ ನೀರು ಜಿನುಗುತ್ತಿದ್ದು, ದೇಗುಲ ಜಲಾವೃತಗೊಂಡಿದೆ. ಎರಡು ಅಡಿ ಎತ್ತರದ ಶಿವಲಿಂಗ ಮುಳುಗಡೆಯಾಗಿದೆ. ರೈತರು ನಂಬಿದ್ದ  ಸೋಯಾ, ಉದ್ದು, ಹೆಸರು ಮುಂಗಾರು ಬೆಳೆಗಳು ನಾಶವಾಗಿದ್ದು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. 

ಒಟ್ನಲ್ಲಿ ಜನಜೀವನ ಬೀದರ್ ಜಿಲ್ಲೆಯಾದ್ಯಂತ ಸಂಪುರ್ಣ ಅಸ್ತವ್ಯಸ್ತವಾಗಿದೆ. ಹತ್ತಾರು ಗ್ರಾಮಗಳು ಜಲಾವೃತಗೊಂಡು ಇದೇ ರೀತಿಯ ಪ್ರವಾಹದ ಪರಿಸ್ಥಿತಿ ಮುಂದುವರಿದ್ರೆ ಸಾವು ನೋವು ಸಂಭವಿಸುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಕ್ಕೂರು ವಿಲ್ಲಾ ಪಾರ್ಟಿಯಲ್ಲಿದ್ದ ಸಂತ್ರಸ್ತೆಯೂ ಸೇರಿದಂತೆ 10 ಮಂದಿಗೆ ಡ್ರಗ್ಸ್ ಪರೀಕ್ಷೆ
ಇರಾನ್-ಇಸ್ರೇಲ್‌ ದಾಳಿ; ಮುಂದಾಗೋ ಭೃಗು ಅಂಗಾರಕ ಯುತಿ ಅಪಾಯ ಬಿಚ್ಚಿಟ್ಟ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ