
ಬೆಂಗಳೂರು (ಡಿ.06): ಯಾವನ್ರಿ ಅವ್ನು ಜೆ ಇ? ನಾನು ಹೇಳೋದನ್ನ ಕೇಳೋದು ಬಿಟ್ಟು ಅವನ ಮಾತು ಕೇಳ್ತೀರಾ? ಎಂದು ಅಧಿಕಾರಿ ವಿರುದ್ಧ ಆರೋಗ್ಯ ಸಚಿವ ರಮೇಶ್ ಕುಮಾರ್ ದರ್ಪ ತೋರಿಸಿದ್ದಾರೆ.
ಜ್ಯೂನಿಯರ್ ಎಂಜಿನೀಯರ್ ಮೇಲೆ ನೀರಿನ ಬಾಟಲ್ ಎತ್ತಿ ಆರ್ಭಟಿಸಿದ್ದಾರೆ. ಅಧಿಕಾರಿಗಳ ವಿರುದ್ಧ ರಾಸ್ಕಲ್, ಯೂಸ್'ಲೆಸ್ ಎಂದು ಹರಿಹಾಯ್ದಿದ್ದಾರೆ. ಅಧಿಕಾರಿಗಳು ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಮಾಡುತ್ತಾರೆಂದು ಬೆಂಬಲಿಗರು ಆರೋಪಿಸಿದ್ದರು. ಈ ಆರೋಪ ಕೇಳಿ ಕೋಲಾರದ ಸುಗುಟೂರು ಗ್ರಾಮದಲ್ಲಿ ರಮೇಶ್ ಕುಮಾರ್ ಗರಂ ಆಗಿದ್ದಾರೆ. ಜೂನಿಯರ್ ಎಂಜಿನೀಯರ್ ವೆಂಕಟೇಶ್ ಮೇಲೆ ಹರಿಹಾಯ್ದಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರು ಇದ್ದಾರೆ ಎಂದು ಬೆಂಬಲಿಗರು ಸಚಿವರನ್ನು ಸಮಾಧಾನಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.