ಗಾಬರಿಗೊಂಡ ಆಶಾ ಭೋಂಸ್ಲೆ, ವೇದಿಕೆ ಬಿಟ್ಟು ಸಹಾಯಕ್ಕೆ ಧಾವಿಸಿದ ಸ್ಮೃತಿ ಇರಾನಿ!

Published : May 31, 2019, 05:10 PM IST
ಗಾಬರಿಗೊಂಡ ಆಶಾ ಭೋಂಸ್ಲೆ, ವೇದಿಕೆ ಬಿಟ್ಟು ಸಹಾಯಕ್ಕೆ ಧಾವಿಸಿದ ಸ್ಮೃತಿ ಇರಾನಿ!

ಸಾರಾಂಶ

ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ರಾಷ್ಟ್ರಪತಿ ಭವನದ ಎದುರು ಬಾರೀ ರಶ್| ಗಾಬರಿಗೊಂಡ ಗಾಯಕಿ ಆಶಾ ಭೋಂಸ್ಲೆ| ಆಶಾ ಸ್ಥಿತಿ ಕಂಡು ವೇದಿಕೆಯಿಂದ ಸಹಾಯಕ್ಕೆ ಧಾವಿಸಿದ ಸ್ಮೃತಿ ಇರಾನಿ

ನವದೆಹಲಿ[ಮೇ.31]: ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮೇ. 30ರಂದು ರಾಷ್ಟ್ರಪತಿ ಭವನದ ಎದುರು ಆಯೋಜಿಸಿದ್ದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ದೇಶ ವಿದೇಶದ ರಾಜಕೀಯ ನಾಯಕರು ಸೇರಿದಂತೆ ಬಾಲಿವುಡ್ ನಾಯಕರೂ ಪಾಲ್ಗೊಂಡಿದ್ದರು. ಶಾಹಿದ್ ಕಪೂರ್, ಮೀರಾ ಕಪೂರ್, ಕಂಗನಾ ರನೌತ್ಸೇರಿದಂತೆ ಸಿನಿಮಾ ಕ್ಷೇತ್ರದ ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಕೂಡಾ ಶಾಮೀಲಾಗಿದ್ದರು. 

ಕಾರ್ಯಕ್ರಮ ಮುಕ್ತಾಯಗೊಂಡ ಆಗಮಿಸಿದ್ದ ಅತಿಥಿಗಳೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಆಗಮಿಸಿದ್ದ ಗಣ್ಯರು ಓಡಾಡಲಾರಂಭಿಸಿದ್ದಾರೆ, ಈ ವೇಳೆ ಭಾರೀ ರಶ್ ನಿರ್ಮಾಣವಾಗಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರ ಮಂದಿ ಭಾಗಿಯಾಗಿದ್ದರು ಎಂಬುವುದು ಗಮನಾರ್ಹ. ಹೀಗಿರುವಾಗ ಈ ರಶ್ ನಡುವೆ ಗಾಯಕಿ ಆಶಾ ಭೋಂಸ್ಲೆ ಗಾಬರಿಗೊಳಗಾಗಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಆಶಾ ಭೋಂಸ್ಲೆ ಸಹಾಯಕ್ಕೆ ಸಚಿವೆ ಸ್ಮೃತಿ ಇರಾನಿ ಧಾವಿಸಿದ್ದಾರೆ ಹಾಗೂ ಅವರನ್ನು ಸುರಕ್ಷಿತವಾಗಿ ಮನೆ ತಲುಪುವಂತೆ ನೋಡಿಕೊಂಡಿದ್ದಾರೆ.

ಸುರಕ್ಷಿತವಾಗಿ ಮನೆ ಸೇರಿದ ಆಶಾ ಭೋಂಸ್ಲೆ ಈ ಕುರಿತಾಗಿ ಟ್ವೀಟ್ ಮಾಡಿದ್ದು, 'ಪ್ರಧಾನ ಮಂತ್ರಿಯ ಪ್ರಮಾಣ ವಚನದ ಬಳಿಕ ಜನಜಂಗುಳಿಯ ನಡುವೆ ನಾನು ಕಳೆದು ಹೋಗಿದ್ದೆ. ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಆದರೆ ಸ್ಮೃತಿ ಇರಾನಿ ನನ್ನ ಸಹಾಯಕ್ಕೆ ಧಾವಿಸಿ, ನಾನು ಸುರಕ್ಷಿತವಾಗಿ ಮನೆಗೆ ತಲುಪಿದ್ದೇನಾ ಎಂಬುವುದನ್ನು ಖಾತ್ರಿಪಡಿಸಿಕೊಂಡಿದ್ದಾರೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು