ರಂಗಕರ್ಮಿ ಪ್ರಸನ್ನ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಭೇಟಿ

Published : Oct 18, 2017, 05:26 PM ISTUpdated : Apr 11, 2018, 12:38 PM IST
ರಂಗಕರ್ಮಿ ಪ್ರಸನ್ನ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಭೇಟಿ

ಸಾರಾಂಶ

ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ.

ಬೆಂಗಳೂರು(ಅ.18): ನಗರದ ಬಸವನಗುಡಿಯಲ್ಲಿರುವ ನಿಡುಮಾಮಿಡಿ ಮಠದಲ್ಲಿ ರಂಗಕರ್ಮಿ ಪ್ರಸನ್ನ ಅವರು ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಭೇಟಿ ಮಾಡಿ ಸತ್ಯಾಗ್ರಹ ಕೈಬಿಡಿವಂತೆ ಮನವಿ ಮಾಡಿದ್ದಾರೆ.

ಕೈ ಮಗ್ಗ ವಸ್ತುಗಳನ್ನು ಹಳ್ಳಿ, ನಗರ ಜನರು ಬಳಸುತ್ತಾರೆ. ಕೈ ಉತ್ಪನ್ನಗಳಿಗೆ ಜಿಎಸ್​​ಟಿ ಹಾಕಿದರೆ ಉತ್ಪಾದಕರಿಗೆ ಸಂಕಷ್ಟ. ಉತ್ಪಾದಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಜಿಎಸ್​ಟಿ ಜಾರಿ ಬಗ್ಗೆ ಕೇಂದ್ರ ಸರ್ಕಾರಕ್ಕೆ ಭಾರೀ ಹೆಮ್ಮೆ ಇದೆ. ಜಿಎಸ್​ಟಿಯಿಂದ ಆಗಿರುವ ಅನಾಹುತದ ಬಗ್ಗೆ ಯೋಚಿಸಬೇಕು. ಇದರಲ್ಲಿ ಸಂಸದರಾದ ನಮ್ಮ ಕರ್ತವ್ಯ ಕೂಡ ಇದೆ. ಪ್ರಧಾನಿ ಭೇಟಿ ಮಾಡಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ. ಹೋರಾಟಕ್ಕೆ ಪ್ರಸನ್ನ ಜೊತೆ ನಾನೂ ಕೂಡಾ ಕೈಜೋಡಿಸುತ್ತೇನೆ. ಉಪವಾಸ ಸತ್ಯಾಗ್ರಹವನ್ನು ಬಿಡುವಂತೆ ಮನವಿ ಮಾಡಿದ್ದೇನೆ. ನಾಳೆ ಸಂಜೆ ಉಪವಾಸ ಕೈ ಬಿಡುವುದಾಗಿ ಹೇಳಿದ್ದಾರೆ' ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಲಾಡ್ಜ್‌ವೊಂದರಲ್ಲಿ ಅಪ್ರಾಪ್ತೆ ಮೇಲಿನ ಸ್ವಾಮೀಜಿ ರೇ*ಪ್‌ ಸಾಬೀತು: ಇಂದು ಶಿಕ್ಷೆ ಪ್ರಕಟ
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್‌ ಆದೇಶ, ಏನಿದು ಪ್ರಕರಣ?