ದಿಲ್ಲಿ ಪ್ರತಿನಿಧಿಯಾಗಿ ಅಂತೂ ಅಜಯ್‌ ಸಿಂಗ್‌ ನೇಮಕ

Published : Jan 27, 2019, 08:40 AM IST
ದಿಲ್ಲಿ ಪ್ರತಿನಿಧಿಯಾಗಿ ಅಂತೂ ಅಜಯ್‌ ಸಿಂಗ್‌ ನೇಮಕ

ಸಾರಾಂಶ

ದಿಲ್ಲಿ ಪ್ರತಿನಿಧಿಯಾಗಿ ಅಂತೂ ಅಜಯ್‌ ಸಿಂಗ್‌ ನೇಮಕ| ಕಗ್ಗಂಟಾಗಿದ್ದ ನೇಮಕಕ್ಕೆ ಸಮನ್ವಯದಲ್ಲಿ ಪರಿಹಾರ| ಇದೀಗ ಕಡತಕ್ಕೆ ಸಹಿ ಹಾಕಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು[ಜ.27]: ಕಾಂಗ್ರೆಸ್‌ ನಾಯಕರು ಶಿಫಾರಸು ಮಾಡಿದ ಒಂದು ತಿಂಗಳ ಬಳಿಕ ಕೊನೆಗೂ ಡಾ.ಅಜಯ್‌ಸಿಂಗ್‌ ಅವರನ್ನು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ.

ಕಾಂಗ್ರೆಸ್‌ ಹೈಕ​ಮಾಂಡ್‌ ಡಿಸೆಂಬರ್‌ ಕೊನೆಯ ವಾರದಲ್ಲಿ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಅವ​ರಿಗೆ ನಿಗಮ ಮಂಡಳಿ ನೇಮ​ಕಾತಿ ಕುರಿತು ಮಾಡಿದ್ದ ಶಿಫಾ​ರ​ಸಿ​ನಲ್ಲಿ ಜೇವರ್ಗಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಧರಂಸಿಂಗ್‌ ಪುತ್ರ ಅಜಯ್‌ಸಿಂಗ್‌ ಅವರನ್ನು ವಿಶೇಷ ಪ್ರತಿನಿಧಿಯಾಗಿ ನೇಮಿಸುವಂತೆಯೂ ಸೂಚಿ​ಸ​ಲಾ​ಗಿತ್ತು. ಎರಡು ನಿಗಮ ಮಂಡಳಿ ಹಾಗೂ ದೆಹಲಿ ವಿಶೇಷ ಪ್ರತಿ​ನಿಧಿ ನೇಮಕಾತಿ​ಯನ್ನು ಮುಖ್ಯಮಂತ್ರಿ ಕುಮಾ​ರ​ಸ್ವಾಮಿ ತಡೆ​ಹಿ​ಡಿ​ದಿ​ದ್ದ​ರು. ಇದು ಕಾಂಗ್ರೆಸ್‌ ಶಾಸ​ಕರ ಆಕ್ರೋ​ಶಕ್ಕೆ ಕಾರ​ಣ​ವಾ​ಗಿತ್ತು.

ಇತ್ತೀ​ಚೆಗೆ ನಡೆದ ಸಮ​ನ್ವಯ ಸಮಿತಿ ಸಭೆ​ಯಲ್ಲಿ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಮೂಲಕ ಬಂದಿ​ರುವ ನೇಮ​ಕಾತಿ ಶಿಫಾ​ರ​ಸನ್ನು ತಡೆ​ಹಿ​ಡಿ​ಯು​ವುದು ನೇರ​ವಾಗಿ ಅವ​ರಿಗೆ ಅವ​ಮಾನ ಮಾಡಿ​ದಂತೆ ಆಗು​ತ್ತದೆ. ಹೀಗಾಗಿ ತಡೆ​ಹಿ​ಡಿ​ದಿ​ರುವ ನೇಮ​ಕಾತಿ ಕುರಿತ ಆದೇಶ ಕೂಡಲೇ ಹೊರ​ಡಿ​ಸಬೇಕು ಎಂದು ಒತ್ತಾ​ಯಿ​ಸಿ​ದ್ದರು. ಇದಕ್ಕೆ ಮುಖ್ಯ​ಮಂತ್ರಿ ಎಚ್‌.ಡಿ.ಕುಮಾ​ರ​ಸ್ವಾಮಿ ಒಪ್ಪಿದ್ದು, ಆದೇಶ ಹೊರ​ಡಿ​ಸು​ವು​ದಾಗಿ ತಿಳಿ​ಸಿ​ದ್ದರು. ಅದರಂತೆ ಕಡತಕ್ಕೆ ಸಹಿ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು