
ಶಿವಮೊಗ್ಗ (ಅ.28): ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಬೃಹತ್ ಸಮಾವೇಶ ನಡೆಸಿರುವ ಬೆನ್ನಲ್ಲೇ ಮಾಜಿ ಪ್ರಧಾನಿ, ಎಚ್. ಡಿ. ದೇವೇಗೌಡ ಶಿವಮೊಗ್ಗದಲ್ಲಿ ಮಾತಾಡಿದ್ದಾರೆ.
ಎರಡು ರಾಷ್ಟ್ರೀಯ ಪಕ್ಷಗಳ ರಾಜಕೀಯ ತಿಕ್ಕಾಟಗಳಲ್ಲಿ ಪ್ರಾದೇಶಿಕ ಪಕ್ಷವಿದೆ ಅನ್ನುವುದನ್ನು ಮರೆತಂತಿದೆ ಅಂತ ನೇರವಾಗಿ ಟೀಕಿಸಿದ್ದಾರೆ.
ಅಲ್ಲದೆ ಯಡಿಯೂರಪ್ಪ ಮತ್ತು ಸಿಎಂ ಮೇಲೆ ವಾಕ್ಸಮರ ನಡೆಸಿರುವ ದೇದೇಗೌಡರು, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಭ್ರಷ್ಟಚಾರವನ್ನು ಯಡಿಯೂರಪ್ಪ ಪ್ರಶ್ನಿಸುವುದಿಲ್ಲ. ಯಡಿಯೂರಪ್ಪನವರ ಭ್ರಷ್ಟಚಾರವನ್ನು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪ್ರಶ್ನಿಸುವುದಿಲ್ಲ ಅಂತ ಗುಡುಗಿದ್ದಾರೆ.
ಅಲ್ಲದೆ ಈ ವಿಚಾರವಾಗಿ ನಾವು ಮೂರು ವರ್ಷದಲ್ಲಿ ಯಾವುದನ್ನು ನೋಡಿಲ್ಲ ಎಂದು ದೇವೇಗೌಡರು ಗುಡುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.