ಬದಲಾವಣೆಗಾಗಿ ಯಾಂತ್ರಿಕ ವಿಧಾನದಲ್ಲಿ ಕಾರ್ಯ ನಡೆಯಲಿ : ಪ್ರಧಾನಿ ಮೋದಿ

Published : Mar 10, 2018, 12:10 PM ISTUpdated : Apr 11, 2018, 12:51 PM IST
ಬದಲಾವಣೆಗಾಗಿ ಯಾಂತ್ರಿಕ ವಿಧಾನದಲ್ಲಿ ಕಾರ್ಯ ನಡೆಯಲಿ : ಪ್ರಧಾನಿ ಮೋದಿ

ಸಾರಾಂಶ

ರಾಷ್ಟ್ರೀಯ ಸಂಸದರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ಸಂಸದರಿಗೂ ಕೂಡ ಕಾರ್ಯವೈಖರಿಗಳ ಬಗ್ಗೆ  ತಿಳಿಯಪಡಿಸಿದ್ದಾರೆ.

ನವದೆಹಲಿ : ರಾಷ್ಟ್ರೀಯ ಸಂಸದರ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಎಲ್ಲಾ ಸಂಸದರಿಗೂ ಕೂಡ ಕಾರ್ಯವೈಖರಿಗಳ ಬಗ್ಗೆ  ತಿಳಿಯಪಡಿಸಿದ್ದಾರೆ. ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ ಎಂದು ಪ್ರಧಾನಿ ಹೇಳಿದ್ದಾರೆ. ಅಲ್ಲದೇ ಕೆಲಸದಲ್ಲಿ ಸ್ಫೂರ್ತಿದಾಯಕತೆ ಹಾಗೂ ಸ್ಪರ್ಧಾತ್ಮಕತೆ , ಸಹಕಾರ ಮನೋಭಾವ ದೇಶದ ಬೆಳವಣಿಗೆಯ ಮೇಲೆ ಉತ್ತಮವಾದ ಪರಿಣಾಮವನ್ನು ಉಂಟು ಮಾಡುತ್ತದೆ ಎಂದು ಹೇಳಿದ್ದಾರೆ.

ಇದೆಲ್ಲವೂ ಕೂಡ ನೀವು ಪ್ರತಿನಿಧಿಸುವ ಪ್ರದೇಶಗಳ ಅಭಿವೃದ್ಧಿಪಡಿಸಲು  ಸಹಕಾರಿಯಾಗುತ್ತದೆ. ಅಲ್ಲದೇ ನೀವು ಪ್ರತಿನಿಧಿಸುವ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ  ಎಂದು ಅವರು ಹೇಳಿದ್ದಾರೆ.

ನಾವೂ ಮಾನವ ಸಂಪನ್ಮೂಲ, ಕೌಶಲ್ಯವನ್ನೂ ಹೊಂದಿದ್ದೇವೆ.  ಸಕಾರಾತ್ಮಕವಾದ ಬದಲಾವಣೆಯನ್ನು ತರಲು ಯಾಂತ್ರಿಕ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಪ್ರಧಾನಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!