
ಹಾಸನ(ಜ.23): ಸುಂದರವಾದ ಸಂಸಾರವಿದ್ದರೂ ಗಂಡ ಮತ್ತೊಂದು ಮದುವೆಯಾಗಿ ಕದ್ದು ಮುಚ್ಚಿ ಸಂಸಾರ ಶುರುಮಾಡಿದ್ದ. ಈ ವಿಷಯ ತಿಳಿದ ಮೊದಲನೆ ಹೆಂಡತಿ, ಎರಡನೇ ಹೆಂಡತಿಯನ್ನು ಬೀದಿಯಲ್ಲೇ ದರ ದರನೆ ಎಳೆದಾಡಿದ್ದಾಳೆ.
ಈ ಘಟನೆ ಹಾಸನದಲ್ಲಿ ನಡೆದಿದ್ದು, ಗಂಡನ ಸಂಸಾರದ ಗುಟ್ಟು ಬೀದಿಗೆ ಬಿದ್ದಿದೆ. ಕಳೆದ 8 ವರ್ಷಗಳ ಹಿಂದೆ ಪ್ರಭಾಕರ್ ಹಾಗೂ ಸೌಮ್ಯ ಮದುವೆಯಾಗಿದ್ದರು ಒಬ್ಬ ಮಗ ಕೂಡಾ ಇದ್ದಾನೆ. ಹೀಗಿದ್ದರೂ ಪ್ರಭಾಕರ್ ಕೆಲ ವರ್ಷಗಳಿಂದ ವಿಜಯಲಕ್ಷಿ ಎಂಬಾಕೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ಬಗ್ಗೆ ಅನೇಕ ಬಾರಿ ನ್ಯಾಯ ಪಂಚಾಯ್ತಿ ಆಗಿದ್ದಲ್ಲದೆ, ವಿಚಾರ ಪೊಲೀಸರವರೆಗೂ ಹೋಗಿತ್ತು. ಇನ್ನು ಈ ಬಗ್ಗೆ ಪ್ರಭಾಕರ್ ಹಾಗೂ ಹಾಗೂ ವಿಜಯಲಕ್ಷ್ಮಿ ಕಳೆದ 20 ದಿನದ ಹಿಂದೆಯಷ್ಟೇ ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದರು.
ಇಷ್ಟಾದರೂ ಪ್ರಭಾಕರ್ ಹಳೇ ಚಾಳಿ ಬಿಟ್ಟಿರಲಿಲ್ಲ. ಅಲ್ಲದೆ ಪ್ರಭಾಕರ್ ಹಾಗೂ ವಿಜಯಲಕ್ಷ್ಮಿ ಕದ್ದು ಮುಚ್ಚಿ ಮದುವೆಯೂ ಆಗಿದ್ದರು. ಈ ವಿಚಾರ ತಿಳಿದ ಮೊದಲನೆ ಹೆಂಡತಿ ಸೌಮ್ಯ, ಎರಡನೆ ಹೆಂಡತಿ ವಿಜಯಲಕ್ಷ್ಮಿ ಮನೆಗೆ ಹೋಗಿ ಆಕೆ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯಿಂದ ಹೊರಗಡೆ ಎಳೆದಾಡಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಈ ಬಗ್ಗೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.