ಮಳೆಯಲ್ಲಿ ರಸ್ತೆ ಎಂದು ತಿಳಿದು ಕೆರೆಗೆ ಹಾರಿದ ಕಾರು: ಐವರು ಜಲಸಮಾಧಿ

Published : Sep 27, 2017, 08:00 PM ISTUpdated : Apr 11, 2018, 12:58 PM IST
ಮಳೆಯಲ್ಲಿ ರಸ್ತೆ ಎಂದು ತಿಳಿದು ಕೆರೆಗೆ ಹಾರಿದ ಕಾರು: ಐವರು ಜಲಸಮಾಧಿ

ಸಾರಾಂಶ

ಈ ದುರಂತ ಸೋಮವಾರ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆ ಮೃತದೇಹವೊಂದು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ನೋಡಿದ್ದಾರೆ.ಈ ಮೃತದೇಹವನ್ನ ಎತ್ತಲು ಪ್ರಯತ್ತಿಸುತ್ತಿದ್ದಾಗ ಕಾರು ಕೂಡ ಕೆರೆಯಲ್ಲಿ ಮುಳುಗಿರುವುದು ಗೊತ್ತಾಗಿದೆ.

ಹಾಸನ(ಸೆ.27): ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಕಾರು ಉರುಳಿ ಬಿದ್ದು ಐವರು ಜಲಸಮಾಧಿ ಆಗಿರೋ ಘಟನೆ ಹಾಸನ ತಾಲೂಕಿನ  ಹನುಮನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಮೃತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಮಳೆ ಸುರಿಯುತ್ತಿದ್ದುದ್ದರಿಂದ ರಸ್ತೆ ಗೊತ್ತಾಗದೆ ಕೆರೆಗೆ ಕಾರು ಉರುಳಿರುವ ಶಂಕೆ ವ್ಯಕ್ತವಾಗಿದೆ. ಈ ದುರಂತ ಸೋಮವಾರ ರಾತ್ರಿ ಸಂಭವಿಸಿದ್ದು, ಇಂದು ಬೆಳಗ್ಗೆ ಮೃತದೇಹವೊಂದು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡ ಸ್ಥಳೀಯರು ನೋಡಿದ್ದಾರೆ.ಈ ಮೃತದೇಹವನ್ನ ಎತ್ತಲು ಪ್ರಯತ್ತಿಸುತ್ತಿದ್ದಾಗ ಕಾರು ಕೂಡ ಕೆರೆಯಲ್ಲಿ ಮುಳುಗಿರುವುದು ಗೊತ್ತಾಗಿದೆ.

 ಆ ಬಳಿಕ ಕಾರಿನಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದೆ. ಕ್ರೇನ್ ಸಹಾಯದಿಂದ ಕಾರನ್ನು ನೀರಿನಿಂದ ಮೇಲೆ ಎತ್ತಲಾಯಿತು. ಹೊಳೆನರಸೀಪುರ ತಾಲೂಕಿನ ತಟ್ಟೆಪುರದ ಅನಿಲ್, ಶಿವಮೊಗ್ಗ ಮೂಲದ ಉಮೇಶ್ ಹಾಗೂ ಅರಸೀಕೆರೆ ಅಂಜನ್ ಎಂಬುವರ ಗುರುತು ಪತ್ತೆಯಾಗಿದ್ದು, ಇಬ್ಬರು ಮಹಿಳೆಯರ ಗುರುತು ಪತ್ತೆಯಾಗಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು; ಬೆಳಗಾವಿ ಸರ್ಕ್ಯೂಟ್ ಹೌಸ್‌ಗೆ ಗಣ್ಯರ ದಂಡು!