
ಹಾಸನ(ಸೆ.10): ಜಿಲ್ಲಾಧಿಕಾರಿಗಳು ಶಾಸಕರು, ಸಚಿವರು, ಮಾಜಿ ಸಚಿವರನ್ನು ಗೌರವಿಸುವುದು ಸಾಮಾನ್ಯ. ಆದರೆ ಹಾಸನದ ಜಿಲ್ಲಾಧಿಕಾರಿ ವಿ.ಚೈತ್ರಾ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣಗೆ ನೀವು ತಂದೆ ಸಮಾನ, ನಾನು ನಿಮ್ಮ ಮಗಳಂತೆ ಎಂದು ಹೇಳುವ ಮೂಲಕ ಹೆಚ್ಚಿನ ವಿಧೇಯತೆ ತೋರಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವುದನ್ನು ವಿರೋಧಿಸಿ ಜೆಡಿಎಸ್ ಡಿಸಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದೆ. ಧರಣಿ ವೇಳೆ ಸರ್ಕಾರಕ್ಕೆ ಡಿಸಿ ಮೂಲಕ ಹೆಚ್ ಡಿ ರೇವಣ್ಣ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ನಂತರ ಒಂದು ರೀತಿ ಗದ್ಗದಿತರಾದ ರೀತಿಯಲ್ಲಿ ಮಾತನಾಡಿದ ಡಿಸಿ ಚೈತ್ರಾ, ನೀವು ನನಗೆ ತಂದೆ ಸಮಾನ. ನಾನು ನಿಮ್ಮ ಮಗಳ ಇದ್ದಹಾಗೇ, ಇದು ನನ್ನ ಮನವಿ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.