
ನವದೆಹಲಿ (ಮಾ. 12): ರಾಜಕಾರಣದಲ್ಲಿ ಇರುವವರು ಮಾತನಾಡುವಾಗ ಎಚ್ಚರದಿಂದಿರಬೇಕು. ಅದರಲ್ಲೂ ಸಾರ್ವಜನಿಕವಾಗಿ ಹೇಳಿಕೆ ಕೊಡುವಾಗ ಹುಶಾರಾಗಿರಬೇಕು. ಏನೋ ಮಾತಾಡುವುದಕ್ಕೆ ಹೋದರೆ ತಲೆದಂಡ ಕೊಡಬೇಕಾಗಿ ಬರಬಹುದು. ಒಂದು ಹೇಳಿಕೆ ಜಮ್ಮು ಕಾಶ್ಮೀರ ವಿತ್ತ ಸಚಿವ ಹಾಸೀಬ್ ದ್ರಾಬು ತಲೆದಂಡವಾಗಿ ಪರಿಣಮಿಸಿದೆ.
ವಿತ್ತ ಸಚಿವ ಹಾಸೀಬ್ ದ್ರಾಬು ಜಮ್ಮು ಕಾಶ್ಮೀರ ಒಂದು ರಾಜಕೀಯ ವಿಚಾರವೇ ಅಲ್ಲ. ಕಳೆದ 50-70 ವರ್ಷಗಳಿಂದ ಸುಮ್ಮನೆ ಇದನ್ನೊಂದು ರಾಜಕೀಯ ವಿಚಾರವನ್ನಾಗಿ ಮಾಡಿ ಕೂಗು ಎಬ್ಬಿಸಲಾಗಿದೆ. ಏನೇ ಮಾಡಿದರೂ ಇಲ್ಲಿನ ರಾಜಕೀಯ ಪರಿಸ್ಥಿತಿ ಬದಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೇ ದ್ರಾಬು ಅವರಿಗೆ ಮುಳುವಾಯಿತು. ತಮ್ಮ ಬಾಯಿ ತಪ್ಪಿನಿಂದಾಗಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕಾಯಿತು. ಪಿಡಿಪಿ ವಕ್ತಾರ ರಫಿ ಅಹ್ಮದ್ ದ್ರಾಬು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಕೂಡಲೇ ಈ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.