ನಾಳೆಯಿಂದ ಹಾಸನಾಂಬೆಯ ದರ್ಶನ

Published : Oct 19, 2016, 05:42 PM ISTUpdated : Apr 11, 2018, 01:09 PM IST
ನಾಳೆಯಿಂದ ಹಾಸನಾಂಬೆಯ ದರ್ಶನ

ಸಾರಾಂಶ

ಮಕ್ಕಳ ಭಾಗ್ಯ ಕರುಣಿಸೋ ಶಕ್ತಿ ಈ ದೇವಿಗಿದೆ ಎಂದು ಭಕ್ತರು ನಂಬಿದ್ದಾರೆ. ಹಾಗೇ ವರ್ಷಕ್ಕೊಮ್ಮೆ ಮಾತ್ರ ಈ ದೇವಿ ದರ್ಶನ ಭಾಗ್ಯ ನೀಡುತ್ತಾಳೆ.

ಹಾಸನದ ಅಧಿದೇವತೆ ಹಾಸನಾಂಬೆ.  ಈಕೆ  ಐತಿಹಾಸಿಕ ಹಿನ್ನೆಲೆ ಹೊಂದಿದ ಶಕ್ತಿದೇವತೆ . ಕಳೆದ ವರ್ಷ ಹಚ್ಚಿದ ದೀಪ ಈ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಹಾಗೂ ದೇವರ ಮುಂದಿಟ್ಟಿದ್ದ ಎಡೆ ಹಳಸಿರುವುದಿಲ್ಲ, ದೇವಿಗೆ ಮುಡಿಸಿರುವ ಹೂವು ಬಾಡದೇ ಹಾಗೇ ಇರುತ್ತದೆ. ಅಂತಹ ಮಹಿಮೆಯನ್ನು ದೇವಿ ಹೊಂದಿದ್ದಾಳೆ ಅನ್ನೋ ನಂಬಿಕೆಯಿದೆ. ಮಕ್ಕಳ ಭಾಗ್ಯ ಕರುಣಿಸೋ ಶಕ್ತಿ ಈ ದೇವಿಗಿದೆ ಎಂದು ಭಕ್ತರು ನಂಬಿದ್ದಾರೆ. ಹಾಗೇ ವರ್ಷಕ್ಕೊಮ್ಮೆ ಮಾತ್ರ ಈ ದೇವಿ ದರ್ಶನ ಭಾಗ್ಯ ನೀಡುತ್ತಾಳೆ. ಅಶ್ವಿಜ ಮಾಸದ ಮೊದಲನೆ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹಾಗೇ ಈ ವರ್ಷ ಅಶ್ವಿಜ ಮಾಸದ ಮೊದಲನೇ ಗುರುವಾರ ಅಂದರೆ ನಾಳೆ  ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನವೆಂಬರ್ 1 ರಂದು ಬಾಗಿಲು ಮುಚ್ಚಲಾಗುವುದು.  ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು