ನಕಲಿ ಖಾತೆ ತೆರೆದು ನಟಿಗೆ ಕಿರುಕುಳ

Published : Jun 06, 2017, 12:49 PM ISTUpdated : Apr 11, 2018, 12:38 PM IST
ನಕಲಿ ಖಾತೆ ತೆರೆದು ನಟಿಗೆ ಕಿರುಕುಳ

ಸಾರಾಂಶ

ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುಷ್ಕರ್ಮಿಗಳ ಕುಚೋದ್ಯತನ ಮುಂದುವ ರಿದಿದ್ದು, ಈಗ ಕಿರುತೆರೆ ಕಿರಿಯ ನಟಿಯೊಬ್ಬರು ಕಿಡಿಗೇಡಿ ತನಕ್ಕೆ ತುತ್ತಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು(ಜೂ.06): ಸಾಮಾಜಿಕ ತಾಣಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ದುಷ್ಕರ್ಮಿಗಳ ಕುಚೋದ್ಯತನ ಮುಂದುವ ರಿದಿದ್ದು, ಈಗ ಕಿರುತೆರೆ ಕಿರಿಯ ನಟಿಯೊಬ್ಬರು ಕಿಡಿಗೇಡಿ ತನಕ್ಕೆ ತುತ್ತಾಗಿರುವ ಘಟನೆ ಬೆಳಕಿಗೆ ಬಂದಿದೆ.

‘ಮನೆದೇವ್ರು' ಧಾರಾವಾಹಿ ಸಹ ಕಲಾವಿದೆ ಸ್ವಾತಿ ಅವರೇ ಕಿರುಕುಳಕ್ಕೆ ಸಿಲುಕಿದ್ದು, ಈ ಸಂಬಂಧ ಸಿಐಡಿ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿರುವ ಸೈಬರ್‌ ಠಾಣೆಗೆ ಪ್ರತ್ಯೇಕವಾಗಿ ಅವರು ದೂರು ದಾಖಲಿಸಿದ್ದಾರೆ. ಆದರೆ, ಈ ದೂರಿನ ಬಗ್ಗೆ ಪೊಲೀಸರು ತನಿಖೆ ನಡೆಸದೆ ನಿರ್ಲಕ್ಷಿಸಿದ್ದಾರೆ ಎಂದು ಕಿರುತೆರೆ ನಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಟಿ ಸ್ವಾತಿ ಅವರ ಭಾವಚಿತ್ರ ಬಳಸಿಕೊಂಡು ದುಷ್ಕರ್ಮಿಯೊಬ್ಬ, ಫೇಸ್‌ಬುಕ್‌ನಲ್ಲಿ ನಟಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾನೆ. ಈ ಖಾತೆಯಲ್ಲಿ ಆ ನಟಿಯ ಮನೆ ವಿಳಾಸ ಹಾಗೂ ಅವರ ತಂದೆ ಮೊಬೈಲ್‌ ಸಂಖ್ಯೆ ಪ್ರಕಟಿಸಿದ್ದಾನೆ. ಅಲ್ಲದೆ ಅಸಭ್ಯ ಬರಹಗಳನ್ನು ಪೋಸ್ಟ್‌ ಮಾಡಿದ್ದಾನೆ. ಇದನ್ನು ಗಮನಿಸಿದ ಕೆಲವರು, ನಟಿಗೆ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ‘ಕನ್ನಡಪ್ರಭ'ಕ್ಕೆ ಮಾತನಾಡಿದ ಸ್ವಾತಿ ಅವರು, ಫೇಸ್‌ಬುಕ್‌ನಲ್ಲಿ ನನ್ನದೊಂದು ಅಧಿಕೃತ ಖಾತೆ ಇದೆ. ಈ ಖಾತೆ ಹೊರತುಪಡಿಸಿದರೆ ಫೇಸ್‌ಬುಕ್‌ನಲ್ಲಿ ನಾನು ಮತ್ತೊಂದು ಖಾತೆ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.ಎರಡು ತಿಂಗಳಿಂದ ಅಪರಿಚಿತ ವ್ಯಕ್ತಿ, ನನ್ನ ಫೋಟೋವನ್ನು ಬಳಸಿಕೊಂಡು ಶೃತಿ ಸೇಠ್‌, ಸ್ವಾತಿ ಸಾನ್ವಿ, ಸ್ವಾತಿ ನಾಗರಾಜ್‌, ಅಜಯ್‌ಕುಮಾರ್‌ ಹಾಗೂ ಚೈತ್ರಗೌಡ ಎಂಬ ಹೆಸರಿನ ನಕಲಿ ಖಾತೆ ತೆರೆದಿದ್ದಾನೆ. ಆ ಖಾತೆ ಮೂಲಕ ನನ್ನ ಕೆಲವು ಸ್ನೇಹಿತರಿಗೆ ಅಸಭ್ಯ ಸಂದೇ ಶಗಳನ್ನು ಕಳುಹಿಸಿದಲ್ಲದೆ ಅಶ್ಲೀಲ ಪೋಟೋಗಳನ್ನು ಪ್ರಕಟಿಸಿದ್ದು, ಈ ಬಗ್ಗೆ ಫೇಸ್‌ಬುಕ್‌ ವ್ಯವಸ್ಥಾಪಕರಿಗೆ ದೂರ ನೀಡಲಾಯಿತು.

ಬಳಿಕ ಆ ನಕಲಿ ಖಾತೆಗಳನ್ನು ಫೇಸ್‌ಬುಕ್‌ ವ್ಯವಸ್ಥಾಪಕರು ಡಿಲೀಟ್‌ ಮಾಡಿದ್ದರು. ಇದಾದ ನಂತರ ಮತ್ತೆ ಕವಿತಾ ನಾಗರಾಜ್‌ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದಾರೆ. ಹೀಗೆ ಈ ಫೇಸ್‌'ಬುಕ್‌ನಲ್ಲಿ ನಿರಂತರವಾಗಿ ಅಪಮಾನಗೊಳಿಸುವ ಸಂದೇಶಗಳನ್ನು ಪ್ರಕಟಿಸಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಸ್ವಾತಿ ಅವರು ದೂರಿದ್ದಾರೆ.

ಈ ಕಿರುಕುಳ ಸಂಬಂಧ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ಈವರೆಗೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತ ಕಿಡಿಗೇಡಿಗಳ ಕಾಟದಿಂದ ನಾನು ಮಾತ್ರವಲ್ಲದೆ ನಮ್ಮ ಇಡೀ ಕುಟುಂಬವೇ ನೋವು ಅನುಭವಿಸುವಂತಾಗಿದೆ. ಜೀವಭೀತಿ ಸಹ ಎದುರಾಗಿದೆ ಎಂದು ನಟಿ ಅಳಲು ತೋಡಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?