ಪತ್ನಿ ಪೀಡಿತರಿಂದ ಶೂರ್ಪನಖಿ ಪ್ರತಿಕೃತಿ ದಹನ

By Web DeskFirst Published Oct 20, 2018, 1:26 PM IST
Highlights

ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

ಔರಂಗಬಾದ್ :   ದಸರಾ ಹಬ್ಬದ ವೇಳೆ ರಾವಣನ ಪ್ರತಿಮೆ ದಹಿಸುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

 ಭಾರತದಲ್ಲಿ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿವೆ. ಸಣ್ಣ ಸಣ್ಣ ವಿಷಯಕ್ಕೂ ಪತಿಯಂದಿರು ಪತ್ನಿಯರಿಂದ ಕಿರುಕುಳಕ್ಕೆ ಒಳಗಾತ್ತಿದ್ದಾರೆ. ಹೀಗಾಗಿ ನಾವು ಪ್ರತಿಕೃತಿ ದಹಿಸಿದ್ದೇವೆ ಎಂದು ಸಂಘದ ಅಧ್ಯಕ್ಷರೊಬ್ಬರು ಹೇಳಿದ್ದಾರೆ.

click me!