ಹಫೀಜ್ ಸಯ್ಯದ್ ಕುಕೃತ್ಯ ಒಪ್ಪಿಕೊಂಡ ಪಾಕ್

Published : May 14, 2017, 11:10 AM ISTUpdated : Apr 11, 2018, 12:41 PM IST
ಹಫೀಜ್ ಸಯ್ಯದ್ ಕುಕೃತ್ಯ ಒಪ್ಪಿಕೊಂಡ ಪಾಕ್

ಸಾರಾಂಶ

ಮಂಡಳಿಗೆ ಈತನನ್ನು ನಿನ್ನೆ ಕರೆತಂದಾಗ 'ಈತ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದ ಆದರೆ ಆಂತರಿಕ ಮಂತ್ರಾಲಯ ಹಫೀಜ್'ನ ಹೇಳಿಕೆಯನ್ನು ತಿರಸ್ಕರಿಸಿದೆ.

ಇಸ್ಲಮಾಬಾದ್(ಮೇ.14): ಮುಂಬೈ ಭಯೋತ್ಪಾದಕ ದಾಳಿಯ ರುವಾರಿ ಹಾಗೂ ಜಮಾತ್ ಉದ್ ದವಾ'ದ ಮುಖ್ಯಸ್ಥ  ಹಫೀಜ್ ಸಯ್ಯದ್'ನ ಕುಕೃತ್ಯವನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಸಯ್ಯದ್ ಮತ್ತು ಆತನ ನಾಲ್ವರು ಸಹಚರರು ಜಿಹಾದ್ ಹೆಸರಿನಲ್ಲಿ ಭಯೋತ್ಪಾದನೆಯ ಬೀಜ ಬಿತ್ತುತ್ತಿದ್ದಾರೆ ಎಂದು ಪಾಕಿಸ್ತಾನದ ಆಂತರಿಕ ಮಂತ್ರಾಲಯ ನ್ಯಾಯಾಂಗ ಪರಿಶೀಲನಾ ಮಂಡಳಿಗೆ ತಿಳಿಸಿದೆ.

ಮಂಡಳಿಗೆ ಈತನನ್ನು ನಿನ್ನೆ ಕರೆತಂದಾಗ 'ಈತ ತನ್ನನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಹೇಳಿಕೆ ಕೊಟ್ಟಿದ್ದ ಆದರೆ ಆಂತರಿಕ ಮಂತ್ರಾಲಯ ಹಫೀಜ್'ನ ಹೇಳಿಕೆಯನ್ನು ತಿರಸ್ಕರಿಸಿದೆ. ಪರಿಶೀಲನಾ ಮಂಡಳಿಯಲ್ಲಿ ಪಾಕ್ ಸುಪ್ರೀಂ ಕೋರ್ಟ್'ನ ನ್ಯಾಯಮೂರ್ತಿ ಇಜಾಜ್ ಅಫ್ಜಲ್ ಖಾನ್, ಲಾಹೋರ್ ಹೈಕೋರ್ಟ್'ನ ನ್ಯಾಯಮೂರ್ತಿ ಆಯೀಷಾ ಹಾಗೂ ಬಲೂಚಿಸ್ತಾನ ಹೈಕೋರ್ಟ್ ನ್ಯಾಯಮೂರ್ತಿ ಜಮಾಲ್ ಖಾನ್ ಮುಖ್ಯಸ್ಥರಾಗಿದ್ದು, ಸಯ್ಯದ್ ಬಗೆಗಿನ ಪೂರ್ಣ ವರದಿಯನ್ನು ಮಂಡಳಿಗೆ ಸಲ್ಲಿಸಿದೆ.

ಈ ಆರೋಪಿಗಳ ಬಗ್ಗೆ ಮತ್ತೊಂದು ಸುತ್ತಿನ ವಿಚಾರಣೆ ಮೇ.15 ರಂದು ನಡೆಯಲಿದೆ. ವಿಶ್ವಸಂಸ್ಥೆ ಹಾಗೂ ಅಂತರರಾಷ್ಟ್ರಿಯ ಸಂಸ್ಥೆಗಳ ಒತ್ತಡದಿಂದಾಗಿ ಪಾಕ್ ಸರ್ಕಾರ ಸಯ್ಯದ್' ಹಾಗೂ ಆತನ ನಾಲ್ವರು ಸಹಚರರನ್ನು ಏ.30 ರಂದು ಭಯೋತ್ಪಾದನಾ ನಿಗ್ರಹ ಕಾಯ್ದೆಯನ್ವಯ 90 ದಿನಗಳ ಕಾಲ ಗೃಹಬಂಧನಕ್ಕೆ ಒಳಪಡಿಸಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ
ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಲಕಿಗೆ ಕಿರುಕುಳ: ನಾಲ್ವರು ಬಾಲಕರ ತಾಯಂದಿರನ್ನು ಬಂಧಿಸಿದ ಪೊಲೀಸರು