'ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ'

Published : Apr 19, 2019, 04:22 PM ISTUpdated : Apr 19, 2019, 04:27 PM IST
'ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ'

ಸಾರಾಂಶ

’ದೇಶದಲ್ಲಿ ನಕಲಿ ರಾಷ್ಟ್ರೀಯವಾದಿಗಳು ಭಾರತದ ಬಹುತ್ವವಾದಿಗಳ ನಡುವೆ ಸಂಘರ್ಷ ಇದೆ. ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ.’

ಶಿವಮೊಗ್ಗ[ಏ.19]: 'ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ' ಎನ್ನುವ ಮೂಲಕ ಎಚ್. ವಿಶ್ವನಾಥ್ ಪ್ರಧಾನಿ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ 'ದೇಶದಲ್ಲಿ ನಕಲಿ ರಾಷ್ಟ್ರೀಯವಾದಿಗಳು ಭಾರತದ ಬಹುತ್ವವಾದಿಗಳ ನಡುವೆ ಸಂಘರ್ಷ ಇದೆ. ಮೋದಿಯವರ ತಪ್ಪು ಹೆಜ್ಜೆ ಖಂಡಿಸಿದರೆ ರಾಷ್ಟ್ರ ದ್ರೋಹಿಗಳಾಗುತ್ತಾರೆ. ಮೋದಿ ಸುಳ್ಳಿನ ಸರಮಾಲೆ ಕೊಟ್ಟಿದ್ದಾರೆ. ಮಲೆನಾಡಿನ ಅಡಿಕೆ ಬೆಳೆಗಾರರನ್ನು ರಕ್ಷಿಸುವುದಾಗಿ ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಸಂಸತ್ತಿನಲ್ಲಿ ಅಡಿಕೆ ಹಾನಿಕಾರಕ ಎಂದು ಅನುಮೋದನೆ ನೀಡಿದೆ. ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನಾ ಆಯೋಗವನ್ನು ಮರ್ಡರ್ ಮಾಡಿದ್ದೀರಿ. ಇದನ್ನು ನೀತಿ ಆಯೋಗ ಎಂದು ಮಾಡಿದ್ದೀರಿ' ಎಂದು ಹರಿಹಾಯ್ದಿದ್ದಾರೆ.

BSNL ವಿಚಾರವಾಗಿ ಮೋದಿಯನ್ನು ಆರೋಪಿಸಿರುವ ವಿಶ್ವನಾಥ್ 'ಈ ಚುನಾವಣೆ ಆಗುತ್ತಿದ್ದಂತೆ ಬಿಎಸ್ ಎನ್ ಎಲ್ ಕೂಡ ಖಾಸಗೀಕರಣ ಆಗುತ್ತೆ. ಕೇಂದ್ರ ಸರ್ಕಾರದಲ್ಲಿ ಶೇ 40 ರಷ್ಟು ಉದ್ಯೋಗ ಖಾಲಿ ಇದೆ. ಶಿವಮೊಗ್ಗದಲ್ಲಿ ವಂಶೋದಯ ಇಲ್ಲವಾ, ರಾಜ್ಯ ಬಿಜೆಪಿ ಅಧ್ಯಕ್ಷರ ಮನೆಯಲ್ಲಿ ವಂಶೋದಯ ಇಲ್ಲವಾ ಮೋದಿಯವರೆ?' ಎಂದು ಸವಾಲೆಸೆದಿದ್ದಾರೆ.

ರಫೇಲ್ ವಿವಾದದ ಕುರಿತಾಗಿ ಮಾತನಾಡಿದ ಎಚ್ ವಿಶ್ವನಾಥ್ 'ರಫೇಲ್ ಯುದ್ಧ ವಿಮಾನಗಳ ಖರೀದಿ ಯಲ್ಲಿ ಮೋದಿ ಮನೆಗೆ ಹೋಗುವುದು ಖಚಿತ. ರಫೇಲ್ ದಾಖಲೆಗಳು ಕಳೆದು ಹೋಗಿದೆ ಎಂದರೆ ಇನ್ಯಾವ ರೀತಿಯಲ್ಲಿ ರಕ್ಷಣೆ ನೀಡುತ್ತದೆ. ಮೋದಿಯವರು ತಮ್ಮ ಸ್ನೇಹಿತರಿಗೆ ಕೆಲಸ ಮಾಡಿ ಕೊಟ್ಟಿದ್ದಾರೆ. ರಾಜೀವ್ ಗಾಂಧಿಯವರ ಅಧಿಕಾರಾವಧಿಯಲ್ಲಿ ಟೆಲಿ ಕಮ್ಯುನಿಕೇಷನ್ ಕ್ರಾಂತಿ ನಡೆಯಿತು. ಇದೀಗ ಮೋದಿ ನಾನು ಮಾಡಿದ್ದು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ದಾವೂದ್ ಇಬ್ರಾಹಿಂ ಹಿಡಿದುಕೊಂಡು ಬರ್ತೀನಿ ಅಂದಿದ್ದ ಮೋದಿ ಯಾಕೆ ಹಿಡಿದುಕೊಂಡು ಬರಲಿಲ್ಲ?' ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು