ಶಿವಕುಮಾರ ಸ್ವಾಮೀಜಿಗೆ ನಾಳೆ ಗುರುವಂದನೆ

Published : May 02, 2017, 08:08 AM ISTUpdated : Apr 11, 2018, 01:05 PM IST
ಶಿವಕುಮಾರ ಸ್ವಾಮೀಜಿಗೆ ನಾಳೆ ಗುರುವಂದನೆ

ಸಾರಾಂಶ

ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಶಾಸಕ ಬಿ. ಸುರೇಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗಂಗಾಧರ ಸ್ವಾಮಿಗಳು ಉಪಸ್ಥಿತರಿರುವ ಸಮಾರಂಭವನ್ನು ಜಿ.ಎಸ್‌.ಶಿವಕುಮಾರ್‌ ಉದ್ಘಾಟಿಸಲಿದ್ದಾರೆ.

ತುಮಕೂರು: ತುಮಕೂರು ತಾಲೂಕು ಮಾಕನಹಳ್ಳಿಯ ಅಪ್ಪಾಜಪ್ಪನ ಪಾಳ್ಯದಲ್ಲಿ ಇದೇ ತಿಂಗಳ 3ರ ಬುಧವಾರ ರಾತ್ರಿ 7.30ಕ್ಕೆ ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನೋತ್ಸವದ ಪ್ರಯುಕ್ತ ಗುರುವಂದನೆ ಹಾಗೂ ಬಸವೇಶ್ವರ ನಾಟಕ ಏರ್ಪಡಿಸಲಾಗಿದೆ. ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು ಶಾಸಕ ಬಿ. ಸುರೇಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಗಂಗಾಧರ ಸ್ವಾಮಿಗಳು ಉಪಸ್ಥಿತರಿರುವ ಸಮಾರಂಭವನ್ನು ಜಿ.ಎಸ್‌.ಶಿವಕುಮಾರ್‌ ಉದ್ಘಾಟಿಸಲಿದ್ದಾರೆ. ಡಾ. ಕವಿತಾ ಕೃಷ್ಣ ಅವರು ಉಪನ್ಯಾಸ ನೀಡಲಿರುವ ಸಮಾರಂಭ ದಲ್ಲಿ, ಸಿ.ವಿ ಮಹದೇವಯ್ಯ, ಟಿ.ಬಿ ಶೇಖರ್‌, ಪಾಂಡು ರಂಗಶೆಟ್ಟಿ, ಚಂದ್ರಮೌಳಿ, ಡಿ.ಶಿವಮಹ ದೇವಯ್ಯ, ವೈ.ಎನ್‌ ಶಿವಣ್ಣ ಮುಂತಾದವರು ಭಾಗ ವಹಿಸಲಿದ್ದಾರೆ. ವಿ.ಶಿವಲಿಂಗಯ್ಯನವರಿಂದ ‘‘ಭೂ ಕೈಲಾಸ'' ಎಂಬ ಶಿವಕಥೆ, ಸಿದ್ಧಗಂಗಾ ಮಠದ ಕಲಾವಿದರಿಂದ ಜಗಜ್ಯೋ ತಿ ಬಸವೇಶ್ವರ ನಾಟಕವನ್ನು ಏರ್ಪಡಿಸಲಾಗಿದೆ ಎಂದು ಎಂ.ವಿ ನಾಗಣ್ಣನವರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಒಂದು-ಎರಡು ಬಣಗಳೆರಡು..' ಹಾಡಿನ ಮೂಲಕ ಸರ್ಕಾರದ ಕಾಲೆಳೆದ ಅಭಯ್ ಪಾಟೀಲ್
ಎರಡು ತಿಂಗಳು ಇಂಟರ್ನ್‌ಶಿಪ್ ಮಾಡುವವರಿಗೆ 4 ಲಕ್ಷ ಸ್ಟೈಫಂಡ್ ಕೊಡುತ್ತದೆ ಈ ಕಾಲೇಜು