
ನವದೆಹಲಿ: ಈಗಾಗಲೇ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಮತ್ತು ಇಬ್ಬರು ವೈದ್ಯರ ವಿರುದ್ಧ, ಸುಮಾರು 400 ಮಂದಿಗೆ ಬಲವಂತದ ಪುರುಷತ್ವ ಹರಣ ಮಾಡಿದ ಆರೋಪದ ಪ್ರಕರಣದಲ್ಲಿ ದೋಷಾರೋಪ ಸಲ್ಲಿಕೆಯಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿ ಜೈಲು ಸೇರಿರುವ ಗುರ್ಮೀತ್ ವಿರುದ್ಧ ಸಿಬಿಐ ಗುರುವಾರ ಪಂಚಕುಲ ವಿಶೇಷ ಕೋರ್ಟ್ನಲ್ಲಿ ದೋಷಾರೋಪ ದಾಖಲಿಸಿತು.
ಗುರ್ಮೀತ್ ಜೊತೆಗೆ ವೈದ್ಯರಾದ ಪಂಕಜ್ ಗರ್ಗ್ ಮತ್ತು ಎಂ.ಪಿ. ಸಿಂಗ್ ವಿರುದ್ಧವೂ ದೋಷಾರೋಪ ದಾಖಲಾಗಿದೆ. ಗುರ್ಮೀತ್ ಬಂಧನದ ಬಳಿಕ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದಲ್ಲಿ ಎಂ.ಪಿ. ಸಿಂಗ್ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಗುರ್ಮೀತ್ ಮುಖೇನ ದೇವರ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿಸಿ, ಹಲವಾರು ಮಂದಿಯ ಪುರುಷತ್ವ ಹರಣ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.