
ಶಿವಮೊಗ್ಗ (ಅ.10): ಶಿವಮೊಗ್ಗ ನಗರದೆಲ್ಲೆಡೆ ನಾಡಹಬ್ಬ ದಸರಾ ಸಂಭ್ರಮದ ಆಚರಣೆ ಮನೆ ಮಾಡಿದೆ. ಆಯುಧ ಪೂಜೆಯ ಅಂಗವಾಗಿ ನಗರದ ವಿವಿಧ ಪೊಲೀಸ್ ಠಾಣೆಗಳ ಆವರಣದಲ್ಲಿ ಕಳ್ಳ - ಖದೀಮರಿಗೆ ಪೊಲೀಸರು ರಾಜಾತಿಥ್ಯ ನೀಡಲು ಬಳಸುತ್ತಿದ್ದ ಲಾಠಿ, ದಪ್ಪ ಚರ್ಮದ ಭರ್ಮಪ್ಪ, ಬಂದೂಕು, ವಾಹನಗಳನ್ನು ಶೃಂಗರಿಸಿ ಪೂಜೆಗೆ ಮಾಡಲಾಯಿತು.
ನಗರದಲ್ಲಿರುವ ಸಾರ್ವಜನಿಕರು ಕಾರು, ಬೈಕ್, ಬಸ್ ಮೊದಲಾದ ವಾಹನಗಳಿಗೆ ಆಯುಧ ಪೂಜೆ ನೇರವೇರಿಸಿದರು.
ವಾಹನಗಳಂತೂ ಬಣ್ಣ ಬಣ್ಣಗಳಿಂದ ಚಿತ್ತಾರ ಮಾಡಿದಂತೆ ಕಾಣಿಸಿಕೊಂಡು ಭರ್ಜರಿ ಆಯುಧ ಪೂಜೆಗೆ ಸಾಕ್ಷಿಯಾದವು. ಅದರಲ್ಲೂ ಖಾಸಗಿ ಬಸ್ಸುಗಳಂತೂ ಮದುವಣಗಿತ್ತಿಯಂತೆ ಶೃಂಗಾರ ಮಾಡಿಕೊಂಡು ಪ್ರಯಾಣಿಕರನ್ನೇರಿಸಿ ಕೊಂಡು ರಸ್ತೆಗಿಳಿದು ಹಬ್ಬದ ಮೆರಗು ಹೆಚ್ಚಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.