
ನವದೆಹಲಿ (ಮಾ.31): ನಾಳೆಯಿಂದ ಸರ್ಕಾರವು ಸರಳೀಕೃತ ನೂತನ ತೆರಿಗೆ ರಿಟರ್ನ್ಸ್ ಅರ್ಜಿಯನ್ನು ಜಾರಿಗೆ ತರುವುದಾಗಿ ಸೂಚಿಸಿದೆ. ಕೆಲವು ಕಾಲಂಗಳನ್ನು ತೆಗೆದು ಹಾಕಿದ್ದು ಅರ್ಜಿ ತುಂಬುವುದನ್ನು ಸರಳೀಕೃತಗೊಳಿಸಲಾಗಿದೆ. ಐಟಿಆರ್1 ಜೊತೆ ಈ ಅರ್ಜಿಯನ್ನು ಸೇರಿಸಲಾಗಿದ್ದು ಸಹಜ್ ಎಂದು ಹೆಸರಿಡಲಾಗಿದೆ.
ಚಾಪ್ಟರ್ ವಿಐಎ ಅಡಿಯಲ್ಲಿ ಬರುವ ಕಡಿತಗಳನ್ನು ತೆಗೆದುಹಾಕಲಾಗಿದೆ. ಹೆಚ್ಚಾಗಿ ಬಳಸುವ ಕಾಲಂಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಸೆಕ್ಷನ್ 80 ಸಿ ಅಡಿಯಲ್ಲಿ ಬರುವ ಕಡಿತ, ಮೆಡಿಕ್ಲೇಮ್ (80ಡಿ) ಹಾಗೆ ಉಳಿಯಲಿದೆ. ಬೇರೆ ಬೇರೆ ವಿಭಾಗಗಳಲ್ಲಿ ವೈಯಕ್ತಿವಾಗಿ ತೋರಿಸಬೇಕಾಗಿರುವ ಕಡಿತಗಳ ಮಾಹಿತಿಯನ್ನು ತುಂಬುವುದು ಬಿಡುವುದು ಅವರ ಆಯ್ಕೆಗೆ ಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.