
ಬೆಂಗಳೂರಿನಲ್ಲಿ ನಿರ್ಮಿಸಲುದ್ದೇಶಿಸಿರುವ ಸ್ಟೀಲ್ಫ್ಲೈಓವರ್ ಬಗ್ಗೆ ಸರ್ಕಾರ ಹಲವು ಸುಳ್ಳುಗಳನ್ನು ಹೇಳಿ ಎಲ್ಲರನ್ನೂ ನಂಬಿಸಲು ಹೊರಟಿದೆ. ಹೌದು , ಸ್ಟೀಲ್ಫ್ಲೈಓವರ್ಗೆ ನಗರದ ಹೆಬ್ಬಾಳದ ಬಳಿ ಇಂಡಿಯನ್ ಏರ್ಫೊರ್ಸ್ಗೆ ಸೇರಿದ ಸುಮಾರು 1 ಎಕರೆ ಜಾಗದ ಸ್ವಾಧೀನದ ಬಗ್ಗೆ ಸಚಿವ ಕೆ.ಜೆ.ಜಾರ್ಜ್ ಸುಳ್ಳು ಹೇಳಿರೋದು ಬಹಿರಂಗವಾಗಿದೆ.
ಬೆಂಗಳೂರಿನಲ್ಲಿ ಸ್ಟೀಲ್ಫ್ಲೈಓವರ್ ನಿರ್ಮಿಸಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಇದಕ್ಕಾಗಿ ಸರ್ಕಾರ ದೊಡ್ಡದೊಂದು ಸುಳ್ಳು ಹೇಳಿ ಸಿಕ್ಕಿ ಬಿದ್ದಿದೆ. ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯಸಭೆಯಲ್ಲಿ ಕರ್ನಾಟಕ ಸರ್ಕಾರ ಸ್ಟೀಲ್ಫ್ಲೈಓವರ್ ಗಾಗಿ ಅಗತ್ಯ ಜಾಗ ಕೇಳಿತ್ತಾ ಎಂದು ರಕ್ಷಣಾ ಸಚಿವಾಲಯದಿಂದ ಮಾಹಿತಿ ಕೇಳಿದ್ದರು. ರಕ್ಷಣಾ ಸಚಿವಾಲಯ ನೀಡಿದ ಉತ್ತರದಿಂದ ರಾಜ್ಯ ಸರ್ಕಾರ ಸ್ಟೀಲ್ಫ್ಲೈಓವರ್ಗೆ ಭೂಸ್ವಾಧೀನದ ಬಗ್ಗೆ ಜನತೆಗೆ ಸುಳ್ಳು ಹೇಳಿರುವ ಅಂಶ ಬಯಲಾಗಿದೆ.
ಅಷ್ಟಕ್ಕೂ ಬಸವೇಶ್ವರ ವೃತ್ತದಿಂದ ಹೆಬ್ಬಾಳವರೆಗೆ ನಿರ್ಮಿಸಲಾಗುವ ಸ್ಟೀಲ್ಫ್ಲೈಓವರ್ಗೆ ಇಂಡಿಯನ್ ಏರ್ಫೋರ್ಸ್ಗೆ ಸೇರಿದ ಸುಮಾರು 1 ಎಕರೆ ಜಾಗದ ಅಗತ್ಯ ಇದೆ. ಆದ್ರೆ ಸರ್ಕಾರ ಭೂಸ್ವಾಧೀನದ ಬಗ್ಗೆ ಇಂಡಿಯನ್ ಏರ್ಫೋರ್ಸ್ ಜೊತೆ ಮಾತುಕತೆಯನ್ನೇ ನಡೆಸಿಲ್ಲ ಅನ್ನೋ ಅಂಶ ಬಯಲಾಗಿದೆ. ಅಷ್ಟೇ ಅಲ್ಲ ಸ್ಟೀಲ್ಪ್ಲೈಓವರ್ ಗೆ ತನ್ನ ಜಾಗ ಕೊಡೋದಿಲ್ಲ ಅಂತ ಇಂಡಿಯನ್ ಏರ್ಫೋರ್ಸ್ ಸ್ಪಷ್ಟಪಡಿಸಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಭೂಸ್ವಾಧೀನದ ಬಗ್ಗೆ ಇಂಡಿಯನ್ ಏರ್ಫೋರ್ಸ್ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಲಾಗಿದೆ ಅಂದಿದ್ದರು. ಆದರೆ ಈ ಮಾತುಕತೆ ನಡೆದೇ ಇಲ್ಲ ಎಂದು ಸಂಸತ್ನಲ್ಲಿ ರಕ್ಷಣಾ ಸಚಿವಾಲಯ ಮಾಹಿತಿ ಕೊಟ್ಟಿದೆ. ಸರ್ಕಾರ ಸುಳ್ಳಿನ ಕೋಟೆ ಕಟ್ಟಿ ದುಬಾರಿ ವೆಚ್ಚದಲ್ಲಿ ಎಲ್ಲರನ್ನೂ ನಂಬಿಸಿ ಸ್ಟೀಲ್ಫ್ಲೈಓವರ್ ಕಟ್ಟಲು ಮುಂದಾಗ್ತಿದೆ ಅನ್ನೋದು ಇದರಿಂದ ಸಾಬೀತಾಗಿದೆ.
ವರದಿ: ಮಸೂದ್ ದೊಡ್ಡೇಬಾಗಿಲು, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.