ಜೀವ ವಿಕಾಸಕ್ಕೆ ಸಾಕ್ಷಿ ಬೇಕೆ?: ಮನುಷ್ಯರಂತೆ ಎದ್ದು ನಿಂತ ಗೊರಿಲ್ಲಾ!

Published : Apr 23, 2019, 02:16 PM IST
ಜೀವ ವಿಕಾಸಕ್ಕೆ ಸಾಕ್ಷಿ ಬೇಕೆ?: ಮನುಷ್ಯರಂತೆ ಎದ್ದು ನಿಂತ ಗೊರಿಲ್ಲಾ!

ಸಾರಾಂಶ

ಮನುಷ್ಯರಂತೆ ಎದ್ದು ನಿಂತು ಸೆಲ್ಫಿಗೆ ಪೋಸ್ ಕೊಟ್ಟ ಗೊರಿಲ್ಲಾ| ಜೀವ ವಿಕಾಸಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?| ಕಾಂಗೋದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಚಮತ್ಕಾರ| ಮನುಷ್ಯರ ಹಾಗೆ ಕಾಲುಗಳ ಮೇಲೆ ಎದ್ದು ನಿಂತ ಡಕಾಜಿ ಮತ್ತು ಡೇಜೆ ಡಕಾಜಿ ಮತ್ತು ಡೇಜೆ ಹೆಣ್ಣು ಗೊರಿಲ್ಲಾ| 

ಕಿನ್ಶಾಸಾ(ಏ.23): ಚಾರ್ಲ್ಸ್ ಡಾರ್ವಿನ್ ನ ಜೀವ ವಿಕಾಸ ಸಿದ್ಧಾಂತ ಅದೆಷ್ಟು ಕರಾರುವಕ್ಕಾಗಿದೆ ಎಂದರೆ, ಇದನ್ನು ಪ್ರಶ್ನಿಸಲು ಮುಂದಾದ ಬಹುತೇಕರು ಜೀವ ವಿಕಾಸದ ಆರಂಭಿಕ ಹಂತದಲ್ಲೇ ಮುಗ್ಗರಿಸಿದ್ದಾರೆ.

ಆಧುನಿಕ ಜೀವ ವಿಜ್ಞಾನದ ಬುನಾದಿಯಾಗಿಯಾಗಿರುವ ಜೀವ ವಿಕಾಸ ಸಿದ್ಧಾಂತದಲ್ಲಿ ಹೇಳಿದ್ದೆಲ್ಲವೂ ದೇವವಾಣಿಯಷ್ಟೇ ಸತ್ಯ. ಮಂಗನಿಂದ ಮಾನವ ಎಂಬ ತಿಳುವಳಿಕೆ ಇನ್ನು ನಿನ್ನೆಯದಲ್ಲ. ಜೀವ ವಿಕಾಸದ ಹಾದಿಯಲ್ಲಿ ಹಂತ ಹಂತವಾಗಿ ಮಾರ್ಪಡುತ್ತಾ ಆಧುನಿಕ ಮಾನವ ರೂಪ ತಳೆದಿದ್ದಾನೆ ಎಂಬುದು ಇದೀಗ ಪ್ರಶ್ನಾತೀತ.

ಅದರಂತೆ ಮನುಷ್ಯನ ಹತ್ತಿರದ ಸಂಬಂಧಿಗಳಾದ ವರಾಂಗ್ಟನ್, ಗೊರಿಲ್ಲಾ ಮುಂತಾದ ಪ್ರಜಾತಿಗಳಲ್ಲಿ ನಾವು ಮಾನವನ ಗುಣಗಳನ್ನು ಕಾಣಬಹುದಾಗಿದೆ. ಇದಕ್ಕೆ ಸಾಕ್ಷಿ ಕಾಂಗೋದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆ ಹಿಡಿದ ಈ ಫೋಟೋ ಸಾಕ್ಷಿ.

ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಆಶ್ರಯ ಪಡೆದಿರುವ ಎರಡು ಗೊರಿಲ್ಲಾಗಳು ಮಾನವನಂತೆ ತನ್ನೆರಡೂ ಕಾಲುಗಳ ಮೇಲೆ ಎದ್ದು ನಿಂತು ಸೆಲ್ಫಿಗೆ ಪೋಸ್ ನೀಡಿವೆ. ಡಕಾಜಿ ಮತ್ತು ಡೇಜೆ ಎಂಬ ಎರಡು ಹೆಣ್ಣು ಗೊರಿಲ್ಲಾಗಳು ತಮ್ಮ ಎರಡೂ ಕಾಲುಗಳ ಮೇಲೆ ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.

ಈ ಕುರಿತು ಮಾಹಿತಿ ನೀಡಿರುವ ಉದ್ಯಾನವನದ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಉಪ ನಿರ್ದೇಶಕ ಬುರಾನ್ಮುವೆ, ಚಿಕ್ಕ ವಯಸ್ಸಿನಿಂದಲೇ ಮನುಷ್ಯರ ಪೋಷಣೆಯಲ್ಲೇ ಬೆಳೆದ ಈ ಎರಡೂ ಹೆಣ್ಣು ಗೊರಿಲ್ಲಾಗಳು ಮನುಷ್ಯರನ್ನು ಅನುಕರಿಸುತ್ತವೆ ಎಂದು ಹೇಳಿದ್ದಾರೆ.

ಲಕ್ಷಾಂತರ ವರ್ಷಗಳ ಹಿಂದೆ ಹೀಗೆಯೇ ಹಂತ ಹಂತವಾಗಿ ಮಾರ್ಪಟ್ಟ ಮಾನವ, ತನ್ನ ಪ್ರಜಾತಿಯ ಇತರ ಜೀವಿಗಳಿಂದ ಬೇರ್ಪಟ್ಟು ಸದ್ಯ ಇಡೀ ಜೀವ ಜಗತ್ತನ್ನು ಆಳುತ್ತಿದ್ದಾನೆ. ಇದೇ ಬೆಳವಣಿಗೆಯ ಹಾದಿಯಲ್ಲಿರುವ ಇತರ ಜೀವಿಗಳೂ ಮುಂದೊಂದು ದಿನ ಆಳ್ವಿಕೆ ಭಾಗ್ಯ ಪಡೆದರೆ ಅಚ್ಚರಿಪಡಬೇಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ ವೆಂಕಟೇಶ್ ಪ್ರಸಾದ್ ಅಧ್ಯಕ್ಷ, ಚುನಾವಣಾ ಫಲಿತಾಂಶ ಪ್ರಕಟ