ವಿಮಾನ ಪ್ರಯಾಣದ ಬಡವನ ಕನಸು ನನಸಾಗುತ್ತಿದೆ..!

Published : Jun 10, 2018, 01:15 PM IST
ವಿಮಾನ ಪ್ರಯಾಣದ ಬಡವನ ಕನಸು ನನಸಾಗುತ್ತಿದೆ..!

ಸಾರಾಂಶ

ತನ್ನ ಕಂಪೆನಿಯ ವಿಮಾನಯಾನದಲ್ಲಿ 1299 ರು. ಕನಿಷ್ಟ ದರ ಘೋಷಿಸಿರುವ ಕಂಪೆನಿ 3 ದಿನಗಳ ಕಾಲ ಅಂದರೆ ಜೂ.5 ರಿಂದ 7ರವರೆಗೆ ಈ ರಿಯಾಯಿತಿ ಪ್ರಕಟಿಸಿತ್ತು. ಇದೀಗ ಜೂ.24 ರಿಂದ ಸೆ.30ರವರ ಅವಧಿಯಲ್ಲಿ ಈ ರಿಯಾಯಿತಿ ಮುಂದುವರಿಯಲಿದೆ.

ಬೆಂಗಳೂರು :  ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.
 
ಬಹುತೇಕ ನಷ್ಟದಲ್ಲಿರುವ ಗೋ ಏರ್ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಲೇ ಬೇಕಿದೆ. ಸ್ವಲ್ಪ ದಿನದ ಹಿಂದೆ ‘ಬ್ಯುಸಿನೆಸ್ ಲೈನ್’  ಪತ್ರಿಕೆ ನೀಡಿದ ಸಂದರ್ಶನದಲ್ಲಿ ಗೋ ಏರ್‌ನ ಸಿಇಒ ಜಾರ್ಜೋ ಡೆ ರೋನಿ, ಕಡಿಮೆ ಮೊತ್ತದ ಆಫರ್ ನೀಡಿ ಪ್ರಯಾಣಿಕರನ್ನು ಸೆಳೆಯುವುದಕ್ಕಿಂತ ಅತ್ಯುತ್ತಮ ಸೇವೆ ನೀಡುವುದು ನಮ್ಮ ಆದ್ಯತೆ ಎಂದಿದ್ದರು. 

ಇದಾಗಿ ಕೆಲವೇ ದಿನಗಳಲ್ಲಿ ಕಡಿಮೆ ದರ ರಿಯಾಯಿತಿ ಪ್ರಕಟಿಸಿ ಉಲ್ಟಾ ಹೊಡೆದಿದ್ದಾರೆ. ತನ್ನ ಕಂಪೆನಿಯ ವಿಮಾನಯಾನದಲ್ಲಿ 1299 ರು. ಕನಿಷ್ಟ ದರ ಘೋಷಿಸಿರುವ ಕಂಪೆನಿ 3 ದಿನಗಳ ಕಾಲ ಅಂದರೆ ಜೂ.5 ರಿಂದ 7ರವರೆಗೆ ಈ ರಿಯಾಯಿತಿ ಪ್ರಕಟಿಸಿತ್ತು. ಜೂ.24 ರಿಂದ ಸೆ.30ರವರ ಅವಧಿಯಲ್ಲಿ ಈ ರಿಯಾಯಿತಿ ಇರುತ್ತದೆ. ಆದರೆ ಈ ಆಫರ್‌ನಲ್ಲಿ ಬುಕ್ ಮಾಡಿರುವ ಏರ್‌ಟಿಕೆಟ್ ಅನ್ನು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ. ಹಾಗೇ ಕ್ಯಾನ್ಸಲ್ ಮಾಡಿದ್ರೆ ಹಣ ವಾಪಾಸ್ ಸಿಗಲ್ಲ.

ಗೋ ಏರ್ 1544 ವಿಮಾನಗಳನ್ನು ಹೊಂದಿದ್ದು, 23 ಸ್ಥಳಗಳಲ್ಲಿ ಕಾರ್ಯಾಚರಿಸುತ್ತವೆ. ಪ್ರತೀ ಬುಧವಾರ ಗೋ ಏರ್‌ನ ದರಗಳಲ್ಲಿ ರಿಯಾಯಿತಿ ಇರುತ್ತದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!