ಮತ್ತೆ ಸರ್ಕಾರದ ವಿರುದ್ಧ ಟ್ವಿಟರ್'ನಲ್ಲಿ ಆರೋಪಿಸಿದ 'ಹರಾಮಿ' ಹೇಳಿಕೆಯ ಸಚಿವ

Published : Jan 16, 2018, 01:24 PM ISTUpdated : Apr 11, 2018, 12:45 PM IST
ಮತ್ತೆ ಸರ್ಕಾರದ ವಿರುದ್ಧ ಟ್ವಿಟರ್'ನಲ್ಲಿ ಆರೋಪಿಸಿದ  'ಹರಾಮಿ' ಹೇಳಿಕೆಯ ಸಚಿವ

ಸಾರಾಂಶ

ಎಂ.ಬಿ.ಪಾಟೀಲ್ ಅವರು ' ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ನಮ್ಮ ನಾಡ ರಕ್ಷಣೆ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ನಿಮ್ಮಂತ ಸಾವಿರ ಜನ ಬಂದರೂ ಕೂಡ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದರು.

ಪಣಜಿ(ಜ.16): ಕನ್ನಡಿಗರನ್ನು ಹರಾಮಿಗಳೆಂದು ಜರಿದು, ಒಂದು ತೊಟ್ಟು ಮಹದಾಯಿ ನೀರು ಬಿಡುವುದಿಲ್ಲ ಎಂದು ಜರಿದಿದ್ದ  ಗೋವಾ ಜಲ ಸಂಪನ್ಮೂಲ ಸಚಿವ ಪಾಳೇಕರ್, ರಾಜ್ಯ ಸಚಿವ ಎಂ.ಬಿ. ಪಾಟೀಲ್ ಅವರ ಟ್ವೀಟ್'ಗೆ ಮತ್ತೆ ರಿಟ್ವೀಟ್ ಮಾಡಿ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ.

'ಕರ್ನಾಟಕ ಸರ್ಕಾರ ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಎಲ್ಲ ಸಾಕ್ಷಿಗಳಿಗೆ ನಿತ್ಯ 50 ಸಾವಿರ ರೂ. ವೆಚ್ಚ ಮಾಡುತ್ತಿದೆ. ಆದರೆ ನಾವು ನಮ್ಮ ಸಾಕ್ಷಿಗಳಿಗೆ ಒಂದು ನಯಾ ಪೈಸೆ ಖರ್ಚು ಮಾಡುತ್ತಿಲ್ಲ' . ಕರ್ನಾಟಕದ ಸಾಕ್ಷಿ ಎ.ಕೆ.ಗೋಸೈನ್ ಅವರಿಗೆ ದಿನಕ್ಕೆ 50 ಸಾವಿರ ರೂ ನೀಡಲಾಗುತ್ತಿದೆ. ನ್ಯಾಯಾಧಿಕರಣದ ಮುಂದೆ ಒಪ್ಪಿದ್ದ ಕರ್ನಾಟಕ ಪರ ಸಾಕ್ಷಿ ಗೋಸೈನ್. ವರದಿ ತಯಾರಿಸುವುದಕ್ಕೆ ಸಹ 5 ಲಕ್ಷ ರೂಪಾಯಿ ಪಡೆದಿದ್ದಾರೆ' ಎಂದು ಟ್ವಿಟರ್ ಮೂಲಕ ಗೋವಾ ಸಚಿವ ವಿನೋದ್ ಪಾಳೇಕರ್ ಆರೋಪಿಸಿದ್ದಾರೆ.

ಎಂ.ಬಿ.ಪಾಟೀಲ್ ಅವರು ' ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ನಮ್ಮ ನಾಡ ರಕ್ಷಣೆ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ನಿಮ್ಮಂತ ಸಾವಿರ ಜನ ಬಂದರೂ ಕೂಡ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ' ಎಂದು ಟ್ವೀಟ್ ಮಾಡಿದ್ದರು.

 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!