ತಮಾಷೆಗಾಗಿ ವಿದ್ಯಾರ್ಥಿಗಳಿಂದ ಬ್ಲೂವೇಲ್ ಚಿತ್ರ: ಪೋಷಕರ ಆತಂಕ

Published : Sep 21, 2017, 12:40 PM ISTUpdated : Apr 11, 2018, 01:00 PM IST
ತಮಾಷೆಗಾಗಿ ವಿದ್ಯಾರ್ಥಿಗಳಿಂದ ಬ್ಲೂವೇಲ್ ಚಿತ್ರ: ಪೋಷಕರ ಆತಂಕ

ಸಾರಾಂಶ

ವಿದ್ಯಾರ್ಥಿಗಳ ಕೈಮೇಲೆ ಮಾರಣಾಂತಿಕ ಆಟವಾದ ಬ್ಲೂವೇಲ್ ಗೇಮ್ ಚಿತ್ರ, ಬಿಡಿಸಿಕೊಂಡಿದ್ದು ನಾಲ್ವರು ವಿದ್ಯಾರ್ಥಿನಿಯರೂ ಸೇರಿ 20 ವಿದ್ಯಾರ್ಥಿಗಳು, ಇದನ್ನು ಕಂಡು ಆತಂಕಗೊಂಡ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ರವಾನೆ, ವಿಚಾರಿಸಿದಾಗ ತಿಳಿದ ವಿಚಾರ ಮಾತ್ರ ತುಂಬಾ ತಮಾಷೆಯಾಗಿತ್ತು. ಸಹಪಾಠಿಗಳನ್ನು ತಮ್ಮತ್ತ ಸೆಳೆಯಲು ವಿದ್ಯಾರ್ಥಿಗಳು ಕೈಮೇಲೆ ಬ್ಲೂವೇಲ್ ಗೇಮ್ ಚಿತ್ರವನ್ನು ಕೆಂಪು ಇಂಕಿನ ಪೆನ್ನಿನಲ್ಲಿ ಬಿಡಿಸಿಕೊಂಡಿದ್ದರು

ಬೆಳಗಾವಿ(ಸೆ.21): ವಿದ್ಯಾರ್ಥಿಗಳ ಕೈಮೇಲೆ ಮಾರಣಾಂತಿಕ ಆಟವಾದ ಬ್ಲೂವೇಲ್ ಗೇಮ್ ಚಿತ್ರ, ಬಿಡಿಸಿಕೊಂಡಿದ್ದು ನಾಲ್ವರು ವಿದ್ಯಾರ್ಥಿನಿಯರೂ ಸೇರಿ 20 ವಿದ್ಯಾರ್ಥಿಗಳು, ಇದನ್ನು ಕಂಡು ಆತಂಕಗೊಂಡ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ರವಾನೆ, ವಿಚಾರಿಸಿದಾಗ ತಿಳಿದ ವಿಚಾರ ಮಾತ್ರ ತುಂಬಾ ತಮಾಷೆಯಾಗಿತ್ತು. ಸಹಪಾಠಿಗಳನ್ನು ತಮ್ಮತ್ತ ಸೆಳೆಯಲು ವಿದ್ಯಾರ್ಥಿಗಳು ಕೈಮೇಲೆ ಬ್ಲೂವೇಲ್ ಗೇಮ್ ಚಿತ್ರವನ್ನು ಕೆಂಪು ಇಂಕಿನ ಪೆನ್ನಿನಲ್ಲಿ ಬಿಡಿಸಿಕೊಂಡಿದ್ದರು.

ಇದು ಬೆಳಗಾವಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ನಡೆದ ಘಟನೆಯಾಗಿದ್ದು 2 ದಿನಗಳ ಬಳಿಕ ಬಹಿರಂಗವಾಗಿದೆ. ವಿದ್ಯಾಲಯದ 8ರಿಂದ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ 20 ವಿದ್ಯಾರ್ಥಿಗಳ ತಮಾಷೆಯ ಆಟ ಕೆಲ ಕಾಲ ಶಿಕ್ಷಕರು, ಪೋಷಕರನ್ನು ಆತಂಕಕ್ಕೆ ದೂಡಿತ್ತು. ನಿಜ ವಿಷಯ ತಿಳಿದು ಸೃಷ್ಟಿಯಾಗಿದ್ದ ಆತಂಕ ದೂರವಾಯಿತು. ಆದರೂ ಸಹ ಮುಂಜಾಗೃತ ಕ್ರಮವಾಗಿ ಚಿತ್ರ ಬಿಡಿಸಿಕೊಂಡ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡಲಾಗಿದೆ.

‘ಮಾರಣಾಂತಿಕ ಬ್ಲೂವೇಲ್ ಆಟ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹೆಚ್ಚು ಪ್ರಚಲಿತವಾಗಿದೆ. ಹೀಗಾಗಿ ಇದರ ಪ್ರಭಾವಕ್ಕೆ ಒಳಗಾಗಿ ತಮ್ಮ ಕೈ ಮೇಲೆ ಕೆಂಪು ಬಣ್ಣದ ಪೆನ್ನಿನಿಂದ ಬ್ಲೂವೇಲ್ ಚಿತ್ರ ಬಿಡಿಸಿಕೊಂಡು ಬೇರೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯುವ ಉದ್ದೇಶ ಹೊಂದಲಾಗಿತ್ತು. ಹೀಗಾಗಿ ತಾವು ಬ್ಲೂ ವೇಲ್ ಗೇಮ್ ಆಡಲಿಲ್ಲ. ಬದಲಾಗಿ ಬೇರೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆಯಲು ಹೀಗೆ ಮಾಡಿದ್ದೆವು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ