ಅಣ್ಣ - ತಂಗಿಯಾಗಬೇಕಿದ್ದವರು ಮದುವೆಯಾದ್ರು; ಸಾವಿನಲ್ಲಿ ಪ್ರೇಮ್ ಕಹಾನಿ ಅಂತ್ಯ

Published : Feb 10, 2018, 12:36 PM ISTUpdated : Apr 11, 2018, 12:39 PM IST
ಅಣ್ಣ - ತಂಗಿಯಾಗಬೇಕಿದ್ದವರು ಮದುವೆಯಾದ್ರು; ಸಾವಿನಲ್ಲಿ ಪ್ರೇಮ್ ಕಹಾನಿ ಅಂತ್ಯ

ಸಾರಾಂಶ

ಸಂಬಂಧದಲ್ಲಿ ಅಣ್ಣ- ತಂಗಿಯಾಗಬೇಕಿದ್ದವರು ಪ್ರೀತಿಯ ಬಲೆಗೆ ಬಿದ್ದು ಪರಾರಿಯಾಗಿ ಸಂಸಾರ ಮಾಡಿದ್ರು.  ಊರು ಬಿಟ್ಟು ಬೇರೆಡೆ ನೆಲೆಸಿದ ಪ್ರೇಮಿಗಳ ಸಂಸಾರದಲ್ಲಿ ಬಿರುಕು ಮೂಡಿ ಕೊನೆಗೆ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.

ಶಿವಮೊಗ್ಗ (ಫೆ.10): ಸಂಬಂಧದಲ್ಲಿ ಅಣ್ಣ- ತಂಗಿಯಾಗಬೇಕಿದ್ದವರು ಪ್ರೀತಿಯ ಬಲೆಗೆ ಬಿದ್ದು ಪರಾರಿಯಾಗಿ ಸಂಸಾರ ಮಾಡಿದ್ರು.  ಊರು ಬಿಟ್ಟು ಬೇರೆಡೆ ನೆಲೆಸಿದ ಪ್ರೇಮಿಗಳ ಸಂಸಾರದಲ್ಲಿ ಬಿರುಕು ಮೂಡಿ ಕೊನೆಗೆ ಪ್ರಿಯತಮೆ ನೇಣಿಗೆ ಶರಣಾಗಿದ್ದಾಳೆ.

ಆಕೆ ಸತ್ತ ನಂತರ ಮೃತದೇಹವನ್ನು ಹುಟ್ಟೂರಿಗೆ ತಂದವನಿಗೆ ಹುಡುಗಿಯ ಕಡೆಯವರು ಧರ್ಮದೇಟು ನೀಡಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ನಿನ್ನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಭದ್ರಾವತಿ ಮೂಲದ ಅಪ್ರಾಪ್ತ ವಯಸ್ಸಿನ ಬಾಲಕಿ ನೇಣಿಗೆ ಶರಣಾಗಿದ್ದಳು. ಇಂದು ಭದ್ರಾವತಿಗೆ ಆಕೆಯ ಶವ ತಂದ ಯುವಕನಿಗೆ ಹುಡುಗಿಯ ಕಡೆಯವರು ಥಳಿಸಿದ್ದಾರೆ. 2016ರ ನವೆಂಬರ್​​ 19ರಂದು ಭದ್ರಾವತಿ ನಗರದ ತಮ್ಮಣ್ಣ ಕಾಲೋನಿಯ ಉಷಾ, ತನ್ನ ದೊಡ್ಡಪ್ಪನ ಮಗ ಆನಂದ್​ ಜೊತೆ ಓಡಿಹೋಗಿ ಹೊಸಪೇಟೆಯಲ್ಲಿ ವಾಸವಾಗಿದ್ದಳು. ಈ ಬಗ್ಗೆ ಭದ್ರಾವತಿಯ ಹೊಸಮನೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಭದ್ರಾವತಿಯ ಸರ್ಕಾರಿ ಅಸ್ಪತ್ರೆಯಲ್ಲಿ ಉಷಾ ಮೃತದೇಹದ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಇನ್ನೊಂದೆಡೆ ಥಳಿತಕ್ಕೆ ಒಳಗಾದ ಆನಂದನನ್ನು ಕೂಡ ಅಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪ್ರಾಪ್ತ ಬಾಲಕಿಯ ಪ್ರೇಮ ಕಹಾನಿಯೊಂದು ಸಾವಿನಲ್ಲಿ ಅಂತ್ಯವಾಗಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಿಶು ಮಾರಾಟ ಜಾಲ ಬೇಧಿಸಿದ ಪೊಲೀಸರು: ಒಂದು ಮಗುವಿಗೆ 15 ಲಕ್ಷ: ಆಸ್ಪತ್ರೆಗಳ ಜೊತೆ ಖದೀಮರ ಸಂಪರ್ಕ
ಭಟ್ಕಳ ಸಿಪಿಐ, ಹೆಡ್ ಕಾನ್ಸ್ಟೆಬಲ್ ಅಮಾನತು: Drink and Drive, ಹಣ ವಸೂಲಿ ಪ್ರಕರಣಕ್ಕೆ ಎಸ್‌ಪಿ ಕಠಿಣ ಕ್ರಮ!