ಗೌರಿ ಲಂಕೇಶ್‌ಗೆ ಒಲಿಯಿತು ಪ್ರತಿಷ್ಠಿತ ಗೌರವ

Published : Jun 06, 2018, 12:24 PM IST
ಗೌರಿ ಲಂಕೇಶ್‌ಗೆ ಒಲಿಯಿತು ಪ್ರತಿಷ್ಠಿತ ಗೌರವ

ಸಾರಾಂಶ

ಹತ್ಯೆಗೀಡಾದ ಭಾರತದ ಪತ್ರಕರ್ತರಾದ ಗೌರಿ ಲಂಕೇಶ್‌ ಹಾಗೂ ಸುದೀಪ್‌ ದತ್ತ ಭೌಮಿಕ್‌ ಅವರಿಗೆ ಅಮೆರಿಕದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೋರಾಡುವ ವಸ್ತುಸಂಗ್ರಹಾಲಯವೊಂದರಿಂದ ಪ್ರತಿಷ್ಠಿತ ಗೌರವ ಲಭಿಸಿದೆ. 

ವಾಷಿಂಗ್ಟನ್‌ :  ಹತ್ಯೆಗೀಡಾದ ಭಾರತದ ಪತ್ರಕರ್ತರಾದ ಗೌರಿ ಲಂಕೇಶ್‌ ಹಾಗೂ ಸುದೀಪ್‌ ದತ್ತ ಭೌಮಿಕ್‌ ಅವರಿಗೆ ಅಮೆರಿಕದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಹೋರಾಡುವ ವಸ್ತುಸಂಗ್ರಹಾಲಯವೊಂದರಿಂದ ಪ್ರತಿಷ್ಠಿತ ಗೌರವ ಲಭಿಸಿದೆ. ಗೌರಿ ಹಾಗೂ ಭೌಮಿಕ್‌ ಸೇರಿದಂತೆ ದೇಶ-ವಿದೇಶದ 18 ಹತ್ಯೆಯಾದ ಪತ್ರಕರ್ತರ ಹೆಸರುಗಳನ್ನು ಸಂಸ್ಥೆಯ ಸ್ಮಾರಕದಲ್ಲಿ ಸೇರಿಸಲಾಗಿದೆ.

ಪ್ರತಿ ವರ್ಷ ‘ನ್ಯೂಸಿಯಂ’ ಹೆಸರಿನ ಈ ಮಾಧ್ಯಮ ವಸ್ತುಸಂಗ್ರಹಾಲಯವು ಹತ್ಯೆಗೆ ಈಡಾದ ಪತ್ರಕರ್ತರ ಹೆಸರುಗಳನ್ನು ತಾನು ಸ್ಥಾಪಿಸಿರುವ ಸ್ಮಾರಕದಲ್ಲಿ ಸೇರಿಸುತ್ತದೆ. ಈ ವರ್ಷವೂ ಇದನ್ನು ಮುಂದುವರಿಸಲಾಗಿದೆ. 18 ಪತ್ರಕರ್ತರ ಪೈಕಿ 8 ಮಂದಿ ಮಹಿಳಾ ಪತ್ರಕರ್ತರು ಈ ಸಲದ ಪಟ್ಟಿಯಲ್ಲಿದ್ದಾರೆ. ‘ಹಿಂದೂ ಮೂಲಭೂತವಾದ ಹಾಗೂ ಜಾತಿ ಪದ್ಧತಿ ವಿರುದ್ಧ 55 ವರ್ಷದ ಗೌರಿ ಲಂಕೇಶ್‌ ಭಾರತದೆಲ್ಲೆಡೆ ಹೋರಾಡಿದ್ದರು’ ಎಂದು ಅವರ ಹೆಸರಿನ ಮುಂದೆ ಬರೆಯಲಾಗಿದೆ.

‘ಗೌರಿ ಲಂಕೇಶ್‌ ಅವರು ಗೌರಿ ಲಂಕೇಶ್‌ ಪತ್ರಿಕೆ ನಿಯತಕಾಲಿಕೆಯ ಸಂಪಾದಕಿಯಾಗಿದ್ದರು. ಕಾರ್ಯಕರ್ತೆಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ರಾಷ್ಟ್ರೀಯವಾದದ ಅಜೆಂಡಾದ ಟೀಕಾಕಾರರಾಗಿದ್ದರು. ಅವರ ಹತ್ಯೆ ದೇಶಾದ್ಯಂತ ಆಕ್ರೋಶ ಎಬ್ಬಿಸಿತು. ಅವರ ಹತ್ಯೆಗೆ ಸಂಬಂಧಿಸಿ ಈವರೆಗೆ ಓರ್ವನನ್ನು ಬಂಧಿಸಲಾಗಿದೆ’ ಎಂದೂ ಉಲ್ಲೇಖಿಸಲಾಗಿದೆ. ಗೌರಿ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ವಗೃಹದಲ್ಲಿ 2017ರ ಸೆ.5ರಂದು ಹತ್ಯೆಗೀಡಾಗಿದ್ದರು.

ಇನ್ನು ಸುದೀಪ್‌ ದತ್ತ ಭೌಮಿಕ್‌ ಅವರು ಅರೆಸೇನೆಯಲ್ಲಿನ ಅವ್ಯವಹಾರ ಬೆಳಕಿಗೆ ತಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಅರೆಸೇನಾ ಅಧಿಕಾರಿಯೊಬ್ಬರಿಗೂ ಭೌಮಿಕ್‌ ಅವರಿಗೂ ಜಗಳವಾಗಿತ್ತು. ಆಗ ತಮ್ಮ ಅಂಗರಕ್ಷಕನಿಗೆ ಭೌಮಿಕ್‌ ಮೇಲೆ ಗುಂಡು ಹಾರಿಸಲು ಅರೆಸೇನಾಧಿಕಾರಿ ಸೂಚನೆ ನಿಡಿದ್ದರು. 2017ರ ನ.21ರಂದು ಭೌಮಿಕ್‌ ಹತ್ಯೆ ನಡೆದಿತ್ತು. ಅವರ ಹೆಸರನ್ನೂ ನ್ಯೂಸಿಯಂನಲ್ಲಿ ನಮೂದಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!