
ಬೆಂಗಳೂರು(ಸೆ. 27): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ರಾಷ್ಟ್ರಾದ್ಯಂತ ಸದ್ದು ಮಾಡಿದರೂ ಅಪರಾಧಿಗಳ ಸುಳಿವು ಇನ್ನೂ ಸಿಕ್ಕಿಲ್ಲ. ವಿಶೇಷ ತನಿಖಾ ತಂಡವು ತಾಂತ್ರಿಕವಾಗಿ ಜಾಲಾಡಿದರೂ ಕೊಲೆಗಾರರ ಜಾಡು ಹಿಡಿಯಲು ಸಾಧ್ಯವಾಗಿಲ್ಲ. ಸುವರ್ಣನ್ಯೂಸ್'ಗೆ ಬಂದಿರುವ ಮಾಹಿತಿ ಪ್ರಕಾರ ಎಸ್'ಐಟಿಯು ತನಿಖೆಯ ರೂಪುರೇಖೆಯನ್ನೇ ಬದಲಿಸಲು ನಿರ್ಧರಿಸಿದೆ. ತನಿಖೆಯಲ್ಲಿ ತಾಂತ್ರಿಕ ಉಪಕರಣಗಳ ಅವಲಂಬನೆ ಬದಲು ಮೈಂಡ್'ಗೇಮ್ ತಂತ್ರ ಅನುಸರಿಸಲು ತನಿಖಾಧಿಕಾರಿಗಳು ಡಿಸೈಡ್ ಮಾಡಿದ್ದಾರೆನ್ನಲಾಗಿದೆ. 20 ವರ್ಷಗಳ ಹಿಂದಿನ ಸಾಂಪ್ರದಾಯಿಕ ತನಿಖಾ ತಂತ್ರವನ್ನು ಅಳವಡಿಸಿಕೊಳ್ಳಲು ಎಸ್'ಐಟಿ ಸಜ್ಜಾಗಿದೆ. "ಆ ದಿನಗಳು" ಮಾದರಿಯಲ್ಲಿ ತನಿಖೆ ನಡೆಯಲಿದೆ. ಇದಕ್ಕಾಗಿ ಸಾಂಪ್ರದಾಯಿಕ ತನಿಖಾ ತಜ್ಞರನ್ನು ಎಸ್'ಐಟಿ ತಂಡವು ಕಲೆಹಾಕುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.