ಹತ್ತು ವರ್ಷದ ಹಿಂದಿನ ಮುಂಗಾರು ಮಳೆ ಹಾಡಿನ ಶೂಟಿಂಗ್ ನೆನಪು ಮಾಡಿಕೊಂಡ ಗಣೇಶ್-ಭಟ್ರು..!

Published : Jul 17, 2017, 08:40 PM ISTUpdated : Apr 11, 2018, 12:51 PM IST
ಹತ್ತು ವರ್ಷದ ಹಿಂದಿನ ಮುಂಗಾರು ಮಳೆ ಹಾಡಿನ ಶೂಟಿಂಗ್ ನೆನಪು ಮಾಡಿಕೊಂಡ ಗಣೇಶ್-ಭಟ್ರು..!

ಸಾರಾಂಶ

ಇತ್ತೀಚೆಗಷ್ಟೇ ಮುಗುಳು ನಗೆ ಚಿತ್ರದ ಕೆಲಸದ ನಿಮಿತ್ತ ಯೋಗರಾಜ್ ಭಟ್-ಗಣೇಶ್ ಹಾಗೂ ಮುಗುಳುನಗೆ ಸಿನಿಮಾದ ನಿರ್ಮಾಪಕ ಸಲಾಂ ಜೋಗ್'ಗೆ ಭೇಟಿ ಕೊಟ್ಟಿದ್ದಾರೆ.

ಮುಂಗಾರು ಮಳೆ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಸಾಕಷ್ಟು ಮೈಲಿಗಲ್ಲು ಸ್ಥಾಪಿಸಿದ್ದ ಆ ಚಿತ್ರವು ಸಿನಿರಸಿಕರ ಮನಸ್ಸಿನಲ್ಲಿ ಎಂದೆದಿಗೂ ಅಚ್ಚಳಿಯದೇ ಉಳಿದಿದೆ. ಗೋಲ್ಡನ್ ಸ್ಟಾರ್ ಗಣೇಶ್-ಯೋಗರಾಜ್ ಭಟ್- ಜಯಂತ್ ಕಾಯ್ಕಿಣಿ ಕಾಂಬಿನೇಶನ್'ನಲ್ಲಿ ಮೂಡಿಬಂದ ಮುಂಗಾರು ಮಳೆಯ ಆ ದಿನಗಳನ್ನು ಭಟ್ರು-ಗಣೇಶ್ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ.

ಹೌದು, ಇತ್ತೀಚೆಗಷ್ಟೇ ಮುಗುಳು ನಗೆ ಚಿತ್ರದ ಕೆಲಸದ ನಿಮಿತ್ತ ಯೋಗರಾಜ್ ಭಟ್-ಗಣೇಶ್ ಹಾಗೂ ಮುಗುಳುನಗೆ ಸಿನಿಮಾದ ನಿರ್ಮಾಪಕ ಸಲಾಂ ಜೋಗ್'ಗೆ ಭೇಟಿ ಕೊಟ್ಟಿದ್ದಾರೆ. ಆ ನಂತರ ವಾಪಾಸಾಗುವಾಗ ಸಾಗರ ಸಮೀಪದ ತಾಳಗುಪ್ಪ ಬಂದಾಗ ಒಂದು ರಸ್ತೆ ನೋಡಿ ಥಟ್ಟನೆ ತಮ್ಮ ವಾಹನ ನಿಲ್ಲಿಸಿ ತಮ್ಮ ಮುಂಗಾರು ಮಳೆಯ ಫ್ಲಾಶ್'ಬ್ಯಾಕ್'ಗೆ ಜಾರಿದ್ದಾರೆ...

ಮುಂದೇನಾಯ್ತು ಅಂತ ನೀವೇ ನೋಡಿ...

ಮುಂಗಾರು ಮಳೆಯ ಆ ಹಾಡು... 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಫ್‌ಐಆರ್ ದಾಖಲಿಸಲು ಹಿಂದೇಟು: ಜ್ಞಾನಭಾರತಿ ಠಾಣೆ ಇನ್ಸ್‌ಪೆಕ್ಟರ್ ರವಿಕುಮಾರ್ ಅಮಾನತು!
ಬೆಳಗಾವಿ ಹಿಂಡಲಗಾ ಜೈಲಲ್ಲಿ ಖೈದಿಗಳ ನಡುವೆ ಹೊಡೆದಾಟ: ಮಾತಾಡೋಕೆ ಫೋನ್ ಸಿಗಲಿಲ್ಲ ಅಂತ ತಲೆ ಜಜ್ಜಿಬಿಟ್ಟ!