
ಬೆಂಗಳೂರು[ಜು.27]: ರಾಜಕೀಯ ನಾಯಕರು ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ಞರ ಅಣತಿಯಂತೆ ನಡೆಯುವುದು ಹೊಸತೇನಲ್ಲ. ಅದರಂತೆ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಅಧಿಕಾರ ಸ್ವೀಕರಿಸುವ ಮೊದಲು ತಮ್ಮ ಹೆಸರಿನಲ್ಲಿನ ಒಂದಕ್ಷರವನ್ನು ಬದಲಾವಣೆ ಮಾಡಿಕೊಂಡಿದ್ದಾರೆ.
ಅವರು ಈಗ ‘ಯಡ್ಯೂರಪ್ಪ’ ಬದಲಾಗಿ ಮತ್ತೆ ‘ಯಡಿಯೂರಪ್ಪ’ ಆಗಿದ್ದಾರೆ. ಯಡ್ಯೂರಪ್ಪ (Yeddyurappa) ಎಂದು ಕೆಲವು ವರ್ಷಗಳ ತಮ್ಮ ಹೆಸರನ್ನು ಅವರು ಬದಲಾಯಿಸಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಬಳಸುವಾಗ ಮಾತ್ರ ಯಡಿಯೂರಪ್ಪ ಎಂತಲೇ ಇತ್ತು.
ಇದೀಗ ಶುಕ್ರವಾರ ಮಧ್ಯಾಹ್ನದ ವೇಳೆ ಟ್ವೀಟರ್ ಖಾತೆಯಲ್ಲಿ ಯಡಿಯೂರಪ್ಪ (Yediyurappa) ಎಂದು ಬದಲಾವಣೆ ಮಾಡಿಕೊಂಡರು. ಜ್ಯೋತಿಷಿಗಳು ಮತ್ತು ಸಂಖ್ಯಾಶಾಸ್ತ್ರಜ್ಞರ ಸಲಹೆ ಮೇರೆಗೆ ಅವರು ಇಂಗ್ಲಿಷ್ನಲ್ಲಿದ್ದ ಹೆಸರನ್ನು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.