ಜಲ್ಲಿಕಟ್ಟು: ಗೂಳಿ ಇಲ್ಲದಿದ್ದರೇನಾಯ್ತು, ನರಿಗೆ ಅನುಮತಿ ಇದೆಯಲ್ಲ!

Published : Jan 19, 2017, 12:00 PM ISTUpdated : Apr 11, 2018, 01:10 PM IST
ಜಲ್ಲಿಕಟ್ಟು: ಗೂಳಿ ಇಲ್ಲದಿದ್ದರೇನಾಯ್ತು, ನರಿಗೆ ಅನುಮತಿ ಇದೆಯಲ್ಲ!

ಸಾರಾಂಶ

ಇಲ್ಲಿನ ಚಿನ್ನಮನೈಕನ್ ಪಾಲ್ಯಂ ಗ್ರಾಮಸ್ಥರಿಗೆ ನರಿ ಜಲ್ಲಿಕಟ್ಟು ನಡೆಸಲು ಅರಣ್ಯಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಸೇಲಂ (ಜ.19): ಇಲ್ಲಿನ ಚಿನ್ನಮನೈಕನ್ ಪಾಲ್ಯಂ ಗ್ರಾಮಸ್ಥರಿಗೆ ನರಿ ಜಲ್ಲಿಕಟ್ಟು ನಡೆಸಲು ಅರಣ್ಯಾಧಿಕಾರಿಗಳು ಅನುಮತಿ ನೀಡಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನರಿ ಬಂದರೂ ಅರಣ್ಯಾಧಿಕಾರಿಗಳ ಕಣ್ಗಾವಲಿನಲ್ಲಿ ನಡೆಸಲು ಅನುಮತಿ ನೀಡಿದ್ದಾರೆ. ಸ್ಪರ್ಧೆಯಲ್ಲಿ ಬಾಗವಹಿಸುವವರಿಗೆ ಕಚ್ಚಬಾರದೆಂದು  ಮುಂಜಾಗ್ರತಾ ಕ್ರಮವಾಗಿ ನರಿ ಬಾಯಿಗೆ ಬಟ್ಟೆ ಕಟ್ಟಲಾಗಿತ್ತು.

ಪ್ರತಿ ವರ್ಷ ಕಾನೂಮ್ ಪೊಂಗಲ್ ದಿನ ಸೇಲಂ ಜಿಲ್ಲಯ ಕೆಲವು ಭಾಗಗಳಲ್ಲಿ ನರಿ ಜಲ್ಲಿಕಟ್ಟು ನಡೆಯುತ್ತದೆ.

ಇಂದು ಗ್ರಾಮಸ್ಥರು ನರಿಯನ್ನು ದೇವಸ್ಥಾನಕ್ಕೆ ತಂದು ಪೂಜೆ ಮಾಡುತ್ತಾರೆ. ಹೂವಿನ ಹಾರವನ್ನು ಹಾಕಲಾಗುತ್ತದೆ. ನಂತರ ನರಿ ಕಾಲನ್ನು ಹಗ್ಗದಿಂದ ಕಟ್ಟಿ ಓಡಿಸಲಾಗುತ್ತದೆ. ಅದನ್ನು ಬೆನ್ನಟ್ಟಿ ಹಿಡಿದು ನಿಲ್ಲಿಸಬೇಕು. ಇದು ನರಿ ಜಲ್ಲಿಕಟ್ಟು ನಡೆಯುವ ರೀತಿ. ಗೂಳಿ ಜಲ್ಲಿಕಟ್ಟು ಮಾದರಿಯಲ್ಲೇ ನಡೆಯುತ್ತದೆ. ನಂತರ ನರಿಯನ್ನು ಕಾಡಿಗೆ ಮರಳಿ ಬಿಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!