ಮೃತ ನಟನೊಬ್ಬನ ಸಹೋದರನಿಂದ ನಟಿ ಮೇಘನಾ ಮನೆಯಲ್ಲಿ ದಾಂಧಲೆ

Published : Nov 04, 2016, 04:27 AM ISTUpdated : Apr 11, 2018, 12:44 PM IST
ಮೃತ ನಟನೊಬ್ಬನ ಸಹೋದರನಿಂದ ನಟಿ ಮೇಘನಾ ಮನೆಯಲ್ಲಿ ದಾಂಧಲೆ

ಸಾರಾಂಶ

ತನ್ನ ಸಹಚರರೊಂದಿಗೆ ಮೇಘನಾ ಮನೆಗೆ ನುಗ್ಗಿದ ಹರೀಶ್'ರ ಸಹೋದರನು, ಮನೆಯಲ್ಲಿರುವ ವಸ್ತುಗಳೆಲ್ಲಾ ಅಣ್ಣ ಹರೀಶನಿಗೆ ಸೇರಿದ್ದವು ಎಂದು ಹೇಳುತ್ತಾನೆ.

ಬೆಂಗಳೂರು(ನ. 04): ಕಿರುತೆರೆ ನಟಿ ಮೇಘನಾ ಅವರ ಮನೆಗೆ ನುಗ್ಗಿ ನಾಲ್ವರು ವ್ಯಕ್ತಿಗಳು ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಹಲ್ಲೆ ನಡೆಸಿದವರ ಪೈಕಿ ಒಬ್ಬಾತ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದ ನಟ ಹರೀಶ್ ಅವರ ಸಹೋದರನೆನ್ನಲಾಗಿದೆ. ಆತ ಮೇಘನಾಗೆ ಕೊಲೆ ಬೆದರಿಕೆಯನ್ನೂ ಹಾಕಿದ ಆರೋಪವಿದೆ. ಮನೆಗೆ ನುಗ್ಗಿ ದಾಂಧಲೆ ನಡೆಸಿದವರನ್ನು ದರ್ಶನ್, ಪೃಥ್ವಿ, ವಿನೂತನ್ ಹಾಗೂ ನವೀನ್ ಎಂದು ಹೇಳಲಾಗುತ್ತಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನು ಈ ಘಟನೆ?
'ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗುವ ಅರಗಿಣಿ ಧಾರಾವಾಹಿಯ ನಟಿ ಮೇಘನಾ ಹಾಗೂ ಮೃತ ಹರೀಶ್ ನಡುವೆ ಈ ಹಿಂದೆ ಲಿವಿಂಗ್'ಟುಗೆದರ್ ಸಂಬಂಧವಿತ್ತು. ಅವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯೂ ಆಗಲಿದ್ದಾರೆಂಬ ಸುದ್ದಿಯೂ ಇತ್ತು. ಕಿರುತೆರೆ ನಟನಾಗಿದ್ದ ಹರೀಶ್ ಇತ್ತೀಚೆಗಷ್ಟೇ ಸಾವನ್ನಪ್ಪಿದ್ದರು. ಇದೀಗ, ತನ್ನ ಸಹಚರರೊಂದಿಗೆ ಮೇಘನಾ ಮನೆಗೆ ನುಗ್ಗಿದ ಹರೀಶ್'ರ ಸಹೋದರನು, ಮನೆಯಲ್ಲಿರುವ ವಸ್ತುಗಳೆಲ್ಲಾ ಅಣ್ಣ ಹರೀಶನಿಗೆ ಸೇರಿದ್ದವು ಎಂದು ಹೇಳುತ್ತಾನೆ. ಈ ವೇಳೆ ಮೇಘನಾ ಹಾಗೂ ಆ ನಾಲ್ವರ ನಡುವೆ ವಾಗ್ವಾದ ನಡೆಯುತ್ತದೆ. ಮೇಘನಾ ಮೇಲೆ ಹರೀಶ್ ತಮ್ಮನಿಂದ ಹಲ್ಲೆಯಾಗುತ್ತದೆ. ಮನೆಯಲ್ಲಿದ್ದ ಪೀಠೋಪರಣಗಳನ್ನು ಆ ನಾಲ್ವರು ಹೊತ್ತೊಯ್ದರೆನ್ನಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿ ನಗರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಲಾಡ್ಜ್‌ವೊಂದರಲ್ಲಿ ಅಪ್ರಾಪ್ತೆ ಮೇಲಿನ ಸ್ವಾಮೀಜಿ ರೇ*ಪ್‌ ಸಾಬೀತು: ಇಂದು ಶಿಕ್ಷೆ ಪ್ರಕಟ
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಕೋರ್ಟ್‌ ಆದೇಶ, ಏನಿದು ಪ್ರಕರಣ?