ಓಡಿಶಾದವರೆಲ್ಲ ಬಡವರು ಹಾಗೂ ಭ್ರಮನಿರಸಿಗಳಂತೆ

By Web DeskFirst Published Oct 16, 2016, 2:53 PM IST
Highlights

'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಭುವನೇಶ್ವರ(ಅ.16): ಸದಾ ವಿವಾದಗಳನ್ನು ಮೈಗಂಟಿಸಿಕೊಳ್ಳುವ ಸುಪ್ರಿಂ ಕೋರ್ಟ್'ನ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಈಗಿನ ಅವರ ಮಾತುಗಳು  ಓರಿಯಾದವರ ಮೇಲೆ ಬಿದ್ದಿದ್ದು, 'ಓರಿಸ್ಸಾದವರು ಬಡವರು ಹಾಗೂ ಭ್ರಮನಿರಸಿಗಳೆಂದು' ಫೇಸ್'ಬುಕ್'ನಲ್ಲಿ ತಮ್ಮ ಬರೆದುಕೊಂಡು ವಿವಾದ ಸೃಷ್ಟಿಸಿದ್ದಾರೆ.

ಈ ಮಾತುಗಳಿಗೆ ಓರಿಸ್ಸಾ ಜನಗಳಲ್ಲದೆ ದೇಶಾದಾದ್ಯಂತ ಕಾಟ್ಜು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ  ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ. ಹಲವು ಒರಿಸ್ಸಾ ಮಂದಿ ಕಾಟ್ಚು ಅವರ ಮಾತುಗಳಿಗೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.

click me!