‘ಸಮಾಜವಾದಿ’ ಮುಖಂಡನಿಂದ RSSಗೆ ಕೋಟಿ ಕೋಟಿ ದಾನ: ಸಂಘಟನೆಯ ಗುಣಗಾನ!

Published : Nov 29, 2018, 01:47 PM ISTUpdated : Nov 29, 2018, 01:55 PM IST
‘ಸಮಾಜವಾದಿ’ ಮುಖಂಡನಿಂದ RSSಗೆ ಕೋಟಿ ಕೋಟಿ ದಾನ: ಸಂಘಟನೆಯ ಗುಣಗಾನ!

ಸಾರಾಂಶ

ದೇಶದ ಗಮನ ಸೆಳೆದ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ನಡೆ! ಆರ್‌ಎಸ್‌ಎಸ್ ಸಹ ಸಂಘಟನೆಗೆ ಕೋಟ್ಯಾಂತರ ರೂ. ಮೌಲ್ಯದ ಆಸ್ತಿ ದಾನ ಮಾಡಿದ ಅಮರ್ ಸಿಂಗ್! ಸೇವಾ ಭಾರತಿ ಸಂಘಟನೆಗೆ ಪೂರ್ವಿಕರ 15 ಕೋಟಿ ರೂ. ಆಸ್ತಿ ದೇಣಿಗೆ! ಸಂಚಲನ ಮೂಡಿಸಿದ ಆರ್‌ಎಸ್‌ಎಸ್‌ಗೆ ಅಮರ್ ಸಿಂಗ್ ಆಸ್ತಿ ದಾನ! ಅಮರ್ ಸಿಂಗ್ ನಡೆಗೆ ಪ್ರತಿಪಕ್ಷಗಳ ತೀವ್ರ ಆಕ್ರೋಶ! ಬಿಜೆಪಿ ಸೇರುವ ಯೋಜನೆಯಲ್ಲಿದ್ದಾರಂತೆ ಅಮರ್ ಸಿಂಗ್ 

ಲಕ್ನೋ(ನ.29): ವಿಚಿತ್ರ ಸನ್ನಿವೇಶವೊಂದರಲ್ಲಿ ಸಮಾಜವಾದಿ ಪಕ್ಷದ ಮಾಜಿ ನಾಯಕ ಮತ್ತು ರಾಜ್ಯಸಭಾ ಸಂಸದ ಅಮರ್ ಸಿಂಗ್, ತಮ್ಮ ಪೂರ್ವಿಕರಿಗೆ ಸೇರಿದ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಆರ್‌ಎಸ್‌ಎಸ್ ಸಹ ಸಂಘಟನೆಗೆ ದೇಣಿಗೆ ನೀಡಿದ್ದಾರೆ.

ಹೌದು, ಅಮರ್ ಸಿಂಗ್ ಆಜಮ್ ಗಡ್ ಜಿಲ್ಲೆಯಲ್ಲಿರುವ ಸುಮಾರು 15 ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಆಸ್ತಿಯನ್ನು ಆರ್‌ಎಸ್‌ಎಸ್ ಸಹ ಸಂಘಟನೆ ಸೇವಾ ಭಾರತಿಗೆ ದಾನ ನೀಡಿದ್ದಾರೆ.

ಅಮರ್ ಸಿಂಗ್ ಸುಮಾರು 4 ಕೋಟಿ ರೂ. ಬೆಲೆ ಬಾಳುವ ತಮ್ಮ ಪೂರ್ವಿಕರ ಮನೆ, 10 ಕೋಟಿ ಬೆಲೆ ಬಾಳುವ ಜಮೀನನ್ನು ಸೇವಾ ಭಾರತಿ ಹೆಸರಿಗೆ ಬರೆದುಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮರ್ ಸಿಂಗ್, ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಆರ್‌ಎಸ್‌ಎಸ್ ಮತ್ತು ಅದರ ಸಹ ಸಂಘಟನೆಗಳಿಗೆ ಬೆಂಬಲವಾಗಿ ತಾವು ಸಣ್ಣ ಸಹಾಯ ಮಾಡಿರುವುದಾಗಿ ಹೇಳಿದ್ದಾರೆ.

ಇನ್ನು ಅಮರ್ ಸಿಂಗ್ ನಡೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಅಮರ್ ಸಿಂಗ್ ಬಿಜೆಪಿ ಪಕ್ಷ ಸೇರುವ ಪ್ರಯತ್ನದಲ್ಲಿದ್ದು, ಕೇಸರಿಪಡೆಯನ್ನು ಒಲಿಸಿಕೊಳ್ಳಲು ಆಸ್ತಿ ದಾನ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಹರಿಹಾಯ್ದಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ