ಪಾಕ್‌ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ!

Published : Oct 07, 2019, 09:11 AM IST
ಪಾಕ್‌ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ!

ಸಾರಾಂಶ

ಪಾಕ್‌ ಮಾಜಿ ಸರ್ವಾಧಿಕಾರಿ ಮತ್ತೆ ಸಕ್ರಿಯ ರಾಜಕೀಯಕ್ಕೆ| ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್‌ನಿಂದ ಅಭಿಮಾನಿಗಳ ಜತೆ ಮಾತುಕತೆ| ರಾಜಕೀಯ ಮುನ್ನೆಲೆಗಾಗಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ ಮುಷರ್ರಫ್‌| 2013ರಲ್ಲಿ ದಾಖಲಾದ ಮುಷರ್ರಫ್‌ ವಿರುದ್ಧದ ದೇಶದ್ರೋಹ ಕೇಸ್‌ ವಿಚಾರಣೆಗೆ ಬಾಕಿ

ಇಸ್ಲಾಮಾಬಾದ್‌[ಅ.07]: ಅನಾರೋಗ್ಯ ಕಾರಣದಿಂದಾಗಿ ರಾಜಕೀಯದಿಂದ ಹಿಂದೆ ಸರಿದಿದ್ದ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್‌ ಮುಷರ್ರಫ್‌ ಮತ್ತೆ ರಾಜಕೀಯ ಮುನ್ನೆಲೆಗೆ ಬರಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಈ ಕಾರ್ಯ ಸಾಧನೆಗಾಗಿ ತಮ್ಮ ಆಲ್‌ ಪಾಕಿಸ್ತಾನ ಮುಸ್ಲಿಂ ಲೀಗ್‌(ಎಪಿಎಂಲ್‌) ಪಕ್ಷವನ್ನು ಪುನಶ್ಚೇತನಗೊಳಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ದೇಶದ್ರೋಹ ಕೇಸ್‌ ಎದುರಿಸುತ್ತಿರುವ ಮುಷರ್ರಫ್‌ ಎಪಿಎಂಎಲ್‌ ಸಂಸ್ಥಾಪನಾ ದಿನದ ಅಂಗವಾಗಿ ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ ಎಪಿಎಂಲ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಮೆಹ್ರೀನ್‌ ಮಲಿಕ್‌, ‘ಕಳೆದ ತಿಂಗಳು 12 ದಿನಗಳ ಕಾಲ ಮುಷರ್ರಫ್‌ ಲಂಡನ್‌ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರವೇ ದುಬೈಗೆ ಆಗಮಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

2007ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದ ಮುಷರ್ರಫ್‌ ಸಂವಿಧಾನವನ್ನು ಅಮಾನತಿಲ್ಲಿಟ್ಟಿದ್ದರು. ಈ ಮೂಲಕ ದೇಶದ ಹಲವು ನ್ಯಾಯಾಲಯಗಳ ನ್ಯಾಯಾಧೀಶರನ್ನು ಗೃಹಬಂಧನದಲ್ಲಿಟ್ಟರು. ಜೊತೆಗೆ, ನೂರಕ್ಕೂ ಹೆಚ್ಚು ನ್ಯಾಯಾಧೀಶರನ್ನು ಸೇವೆಯಿಂದ ವಜಾಗೊಳಿಸಿದ್ದರು. ಈ ಸಂಬಂಧ 2013ರಲ್ಲಿ ಆಗಿನ ಪಾಕಿಸ್ತಾನ ಪ್ರಧಾನಿಯಾಗಿದ್ದ ನವಾಜ್‌ ಷರೀಫ್‌ ನೇತೃತ್ವದ ಸರ್ಕಾರ, ಮುಷರ್ರಫ್‌ ವಿರುದ್ಧ ದೇಶದ್ರೋಹ ಕೇಸ್‌ ದಾಖಲಿಸಿಕೊಂಡಿತ್ತು. ಏತನ್ಮಧ್ಯೆ, 2016ರಲ್ಲಿ ಅನಾರೋಗ್ಯದ ಚಿಕಿತ್ಸೆಗಾಗಿ ಮುಷರ್ರಫ್‌ ಪಾಕಿಸ್ತಾನದಿಂದ ದುಬೈಗೆ ಹಾರಿದ್ದ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿನಿಮಾಗೆ 50 ಕೋಟಿ ಬೇಕು ಅಂತಾ ಕೇಳಿದ್ರಂತೆ. 'ಇಲ್ಲ ಸರ್‌ ಅದಕ್ಕಿಂತ ಹೆಚ್ಚು' ಯಶ್‌ ಖಡಕ್‌ ಉತ್ತರ ಕೇಳಿ ಬಾಲಿವುಡ್‌ ಶಾಕ್‌!
ಟಾಟಾ ಗ್ರೂಪ್‌ನ ನಿಜವಾದ ಮಾಲೀಕರು ಯಾರು? ಲಕ್ಷಾಂತರ ಕೋಟಿ ಲಾಭದ ಹಣ ಎಲ್ಲಿಗೆ ಹೋಗುತ್ತೆ...